12ರಂದು ರೇಣುಕಾಚಾರ್ಯ ಜಯಂತಿ: ಕಾರ್ಯಕ್ರಮ ಯಶಸ್ವಿಗೆ ಭಂಕಲಗಿ ಮನವಿ

0
39

ಚಿತ್ತಾಪುರ: ಅಖೀಲ ಭಾರತದ ವೀರಶೈವ ಮಹಾಸಭಾ ಹಾಗೂ ಜಂಗಮ ಸಮಾಜದ ವತಿಯಿಂದ ದಿ.12 ರಂದು ರವಿವಾರ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಸಮಾಜ ತಾಲ್ಲೂಕು ಅಧ್ಯಕ್ಷ ನಾಗರಾಜ್ ಭಂಕಲಗಿ ತಿಳಿಸಿದ್ದಾರೆ.

ಶುಕ್ರವಾರ ಪತ್ರಿಕೆ ಪ್ರಕಟಣೆ ನೀಡಿದ ಅವರು ಸದರಿ ಕಾರ್ಯಕ್ರಮವು ಪಟ್ಟಣದ ಅಕ್ಕಮಹಾದೇವಿ ದೇವಾಲಯದಲ್ಲಿ ಬೆಳಿಗ್ಗೆ 11ಗಂಟೆಗೆ ನಡೆಯಲಿದ್ದು,ಕಾರ್ಯಕ್ರಮದಲ್ಲಿ ಹಲವು ಮಠಾಧೀಶರು ಸಾನಿಧ್ಯ ವಹಿಸಲಿದ್ದು,ಸಮಾಜದ ಭಾಂದವರು,ರಾಜಕೀಯ ಮುಖಂಡರು. ಜಗದ್ಗುರು ರೇಣುಕಾಚಾರ್ಯರ ಅನುಯಾಯಿಗಳು,ಮಾತೆಯರು,ಯುವಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here