ನಾಳೆ ಆರ್.ಪಿ.ಐ (ಅಠವಲೆ) ಪಕ್ಷದ ಸಭೆ

0
11

ಕಲಬುರಗಿ; ಮುಂಬರುವ ವಿಧಾನ ಸಭಾ ಚುನಾವಣೆ ಸಿದ್ಧತೆಗಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಲೆ) ಪಕ್ಷವು ಮಾರ್ಚ 18.ರಂದು ಶನಿವಾರ ಸಂಜೆ 4.00 ಗಂಟೆಗೆ ನಗರದ ಕನ್ನಡ ಭವನದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿದೆ. ಎಂದು ಪಕ್ಷದ ಜಿಲ್ಲಾಧ್ಯಕ್ಷ ಪಾಂಡುರಂಗ ಎಂ.ಕೋಟ್ರೆ ಅವರು ತಿಳಿಸಿದ್ದಾರೆ.

ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಡಾ. ಎಮ್ ವೆಂಕಟಸ್ವಾಮಿ ಇವರು ಸಭೆಯನ್ನು ಉದ್ಘಾಟಿಸಟಿದ್ದಾರೆ. ಕರ್ನಾಟಕ ಸಂಸದೀಯ ಮಂಡಳಿಯ ಸಂಚಾಲಕರು ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಎ ಬಿ ಹೊಸಮನಿ ಚಿಕ್ಕಬಳ್ಳಾಪೂರ ಜಿಲ್ಲಾಧ್ಯಕ್ಷರಾದ ಸಿ ವೆಂಕಟರಮಣಪ್ಪ ಮುಂತಾದವರು ಭಾಗವಹಿಸಲ್ಲಿದ್ದಾರೆ. ಆದ್ದರಿಂದ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಅಂಬೇಡ್ಕರ ಅಭಿಮಾನಿಗಳು, ತಪ್ಪದೇ ಆಗಮಿಸಿ ಸಭೆ ಯಶಸ್ವಿಗೊಳಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here