ದಿಗ್ಗಾಂವ-ಸಿದ್ಧವೀರೇಶ್ವರ 97ನೇ ಪುಣ್ಯರಾಧನೆ

0
80

ಚಿತ್ತಾಪುರ: ತಾಲ್ಲೂಕಿನ ದಿಗ್ಗಾಂವ ಗ್ರಾಮದ ಪಂಚಗ್ರಹ ಹಿರೇಮಠದಲ್ಲಿ ಲಿಂಗೈಕ್ಯ ಸದ್ಗುರು ಶ್ರೀ ಸಿದ್ಧವೀರೇಶ್ವರ 97ನೇ ಪುಣ್ಯರಾಧನೆ ಕಾರ್ಯಕ್ರಮ ಮಾರ್ಚ್ 26 ಭಾನುವಾರ ನಡೆಯಲಿದೆ ಎಂದು ಮಠದ ವಕ್ತಾರ ಶರಣು ಊಡಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ.25ರಂದು ಸಂಜೆ 6 ಗಂಟೆಗೆ ರಾಜಶೇಖರಯ್ಯ ಸ್ವಾಮಿ ಹಿರೇಮಠ ರೋಣ ಇವರ ಕಲಾತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ.ಮಾ. 26 ಭಾನುವಾರ ಬೆಳಿಗ್ಗೆ ರುದ್ರಾಭಿಷೇಕ,ಭಿಲ್ವಾರ್ಚನೆ,ಮಹಾಮಂಗಲವು ನಡೆಯಲ್ಲಿದ್ದು ಕಾರ್ಯಕ್ರಮದ ನೇತೃತ್ವದವನ್ನು ಷ. ಬ್ರ.ಶ್ರೀ ಸಿದ್ಧವೀರ ಶಿವಾಚಾರ್ಯರು ವಹಿಸಲಿದ್ದಾರೆ.ಕಾರ್ಯಕ್ರಮಕ್ಕೆ ಅನೇಕ ಮಠಾಧೀಶರು,ರಾಜಕೀಯ ಗಣ್ಯರು,ಧಾರ್ಮಿಕ,ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದ ಸಾಧಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here