ಕಾಳಗಿ: ಜಗದ್ಗುರು ಶ್ರೀ ರೇಣುಕಾಚಾರ್ಯರ 51 ಅಡಿ ಮೂರ್ತಿ ಲೋಕಾರ್ಪಣೆ

0
18

ಕಾಳಗಿ: ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರೇವಗ್ಗಿ, (ರಟಕಲ್) ನಲ್ಲಿ ಕಲಬುರಗಿ ಲೋಕಸಭಾ ಸದಸ್ಯರಾದ ಶ್ರೀ ಉಮೇಶ್ ಜಾದವ್ ರವರ ತಂದೆಯವರಾದ ದಿವಂಗತ ಶ್ರೀ ಗೋಪಾಲದೇವ ಜಾಧವ್ ರವರ ಸ್ಮರಣಾರ್ಥವಾಗಿ ಜಗದ್ಗುರು ಶ್ರೀ ರೇಣುಕಾಚಾರ್ಯರ 51 ಅಡಿ ಎತ್ತರದ ಮೂರ್ತಿ,ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಹೋಮ ಹವನ ಪೂಜೆಯಲ್ಲಿ ಉಮೇಶ್ ಜಾಧವ್ ದಂಪತಿ ಹಾಗೂ ಶಾಸಕರಾದ ಅವಿನಾಶ್ ಜಾಧವ್ ಪಾಲ್ಗೊಳ್ಳುವ ಮೂಲಕ ಲೋಕಾರ್ಪಣೆ ಮಾಡಿದರು.ನಂತರ ನಡೆದ ಧರ್ಮ ಸಭೆಯನ್ನು ವಿವಿಧ ಮಠಾಧೀಶರು ಹಾಗೂ ಲೋಕಸಭಾ ಸದಸ್ಯರಾದ ಉಮೇಶ್ ಜಾಧವ್ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಾ. ಉಮೇಶ್ ಜಾಧವ್ ಮಠಗಳಿಂದ ಸಾಮಾಜಿಕ ಸ್ವಾಸ್ಥ್ಯ ಸ್ಥಿರವಾಗಿದೆ. ಮಠಗಳಲ್ಲಿ ಆರೋಗ್ಯ, ಕಲಹ,ರಾಜಕೀಯ ಹಲವಾರು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಶಕ್ತಿ ಇದೆ ಎಂದರು. ಇವತ್ತು ನಮ್ಮ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಸನಾತನ ಧರ್ಮದ ಉಳಿವಿಗಾಗಿ ಕಾಶಿ ವಿಶ್ವನಾಥ ದೇವಾಲಯ, ರಾಮಜನ್ಮಭೂಮಿ ಅನೇಕ ದೇವಾಲಯಗಳನ್ನು ನವಿಕರಿಸಿದ್ದರಿಂದಾಗಿ ಇವತ್ತು ದೇಶದಲ್ಲಿ ಬಹುತೇಕ ಜನ ಭಕ್ತಿ ಮಾರ್ಗದಲ್ಲಿ ನಡೆದ್ದು ದೇಶದ ಸಂಸ್ಕೃತಿ, ಪರಂಪರೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವತಾಗಿದೆ. ಹಾಗೆಯೇ ನಾವು ರಾಜಕೀಯವಾಗಿ, ಸಾಮಾಜಿಕವಾಗಿ, ಬಲಿಷ್ಠರಾಗಿ ಬೆಳೆಯಲು ನಮಗೆ ವೀರಶೈವ ಲಿಂಗಾಯತರ ಆಶೀರ್ವಾದ ಬೇಕೆ ಬೇಕೆಂದು ತಿಳಿಸಿದರು.

Contact Your\'s Advertisement; 9902492681

ಮಗನನ್ನು ನಿಮ್ಮೆಲ್ಲರ ಒತ್ತಾಯದ ಮೇರೆಗೆ ರಾಜಕೀಯಕ್ಕೆ ತಂದಿದ್ದು ಚಿಂಚೋಳ್ಳಿ ಕ್ಷೇತ್ರದ ಬಹು ದಿನಗಳ ಬೇಡಿಕೆಗಳಾದ ಐನಪುರ್ ಏತನೀರಾವರಿ, ಚಿಂಚೋಳಿಯ ಶುಗರ್ ಫ್ಯಾಕ್ಟರಿ,ಜಲಜೀವನ್ ಮಿಷನ್,ಚಿಂಚೋಳಿಯ ಮಿನಿವಿಧಾನ ಸೌದ,ರಸ್ತೆಗಳು,ಬಸ ನಿಲ್ದಾಣ ಸೇರಿದಂತೆ ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳು ಶಾಸಕರಾದ ಅವಿನಾಶ ಜಾಧವ ಅವರು ಮಾಡಿದ್ದಾರೆ ಬರುವಂತಹ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲಿಸಿ ಈ ಕ್ಷೆತ್ರದ ಅಭಿವೃದ್ಧಿಯ ಕೆಲಸ ಮಾಡುತೇವೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಮಠದ ಮಠದಿಶಾರು ಹಾಗೂ ವಿಜಯಕುಮಾರ್ ಚೇಂಗಟಿ, ಶಿವರಾಜ್ ಪಾಟೀಲ್ ಗೊಣಗಿ,ಇಮ್ತಿಯಾಜ್ ಅಲಿ, ಅನೇಕರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here