ಕಲಬುರಗಿ: ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ 9 ರಲ್ಲಿ 7 ಸ್ಥಾನ ಕೈ ಗೆದ್ದು ಬೀಗಿರುವುದು ಸಂತಸ ತಂದಿದೆ. ಖರ್ಗೆಯವರು ಎಐಸಿಸಿಸಿ ಅದ್ಯಕ್ಷರಾದ ನಂತರ ನಡೆದ ಚುನಾವಣೆಯಲ್ಲಿ ಪಕ್ಷದ ಈ ಸಾಧನೆ ಬೇರು ಮಟ್ಟದ ಕಾರ್ಯಕರ್ತರಲ್ಲಿ ಸಂತಸ ಹೆಚ್ಚಿಸಿದೆ, ಶಕ್ತಿ ತುಂಬಿದೆ, ಮುಂದಿನ ದಿನಗಳಲ್ಲಿ ಈ ಜೋಶ್ ಹಾಗೇ ಮುಂದುವರಿಯಲಿದೆ ಎಂದು ಸುಲೇಪೇಟ ಗ್ರಾಮದ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಚಾಂದಪಾಶಾ ಮೋಮಿನ್ ಹೇಳಿದ್ದಾರೆ.
ಕಲಬುರಗಿ ಸೇರಿದಂತ ಇಡೀ ಕಲ್ಯಾಣ ನಾಲ್ಲಿ ಹೆಚ್ಚಿನ ಸ್ಥಾನ ಕಾಂಗ್ರೆಸ್ ಗೆದ್ದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆದು ಸರ್ಕಾರ ರಚನೆಗೆ ಜನರೇ ಆದೇಶ ನೀಡಿದ್ದಾರೆ. ಜನ ಪಕ್ಷದ ತತ್ವ ಸಿದ್ದಾಂತಗಳ ಮೇಲೆ ಇಟ್ಟಂತಹ ನಂಬಿಕೆಗೆ ಇದು ಕನ್ನಡಿ ಹಿಡಿದಿದೆ. ಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಿ ನೀಡಿರುವ ಗ್ಯಾರಂಟಿಗಳನ್ನೆಲ್ಲ ಜಾರಿಗೆ ತರಲಿದೆ. ಜನರಿಗೆ ಅದರಿಂದ ಉಪಯೋಗವಾಗಲಿದೆ ಎಂದು ಮೋಮಿನ್ ಹೇಳಿದ್ದಾರೆ.