ಕಲಬುರಗಿ: ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಅಧಿಕಾರಿಗಳಾಗಿ 2ನೇ ಬಾರಿಗೆ ಸಾಧಿಕ್ ಹುಸೇನ್ ಅಧಿಕಾರ ವಹಿಸಿಕೊಂಡಿರುವ ನಿಮಿತ್ತ ಜೇವರ್ಗಿ ಯಡ್ರಾಮಿ ತಾಲೂಕಿನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಕಚೇರಿ ಸಿಬ್ಬಂದಿಗಳು ಶುಭ ಕೋರಿದರು.
ಈ ವೇಳೆ ಮಾತನಾಡಿದ ಪರಮಾನಂದ ಕಂಬಾರ, ನಿಷ್ಠೆ, ದಕ್ಷೆ, ಪ್ರಾಮಾಣಿಕತೆಗೆ ಹೆಸರಾದ ಸಾದಿಕ್ ಸರ್ ಮತ್ತೆ ನಮ್ಮ ಇಲಾಖೆಗೆ ಬಂದದ್ದು ನಮ್ಮ ಭಾಗ್ಯ ಎಂದು ಹೇಳಿದರು.
ಪರಮಾನಂದ ಕಂಬಾರ, ಗುರುರಾಜ್ ಹೆರೂರ್, ಚಂದ್ರುಗೌಡ, ಯಡ್ರಾಮಿ, ಶರಣು ಹಿಪ್ಪರಗಿ ಹಾಗೂ ಇನ್ನಿತರ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿ ಸಂತಸ ವ್ಯಕ್ತಪಡಿಸಿದರು.