ಕಲಬುರಗಿ: ಆಳಂದ ಕಾಲೋನಿಯಲ್ಲಿರುವ ಕಿವುಡ ಹಾಗೂ ಮೂಕರ ಶಾಲೆಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನದ ನಿಮಿತ್ತ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಾರ್ತಿಕ ನಾಟೀಕಾರ ನೇತೃತ್ವದಲ್ಲಿ ಶಾಲೆಯ ಮಕ್ಕಳೊಂದಿಗೆ ಕೆಕ್ ಕತ್ತರಿಸಿ ಅನ್ನಸಂತರ್ಪಣೆ ಮಾಡಲಾಯಿತು. ಮುಖಂಡರಾದ ಹರಿಶ ಖಾನಾಪೂರ, ಮಂಜುಳಾ ಪಾಟೀಲ, ಸ್ವೇತಾ ಬಳಿಚಕ್ರ, ಪ್ರದೀಪ, ಆಕಾಶ, ಶ್ರಶೈಲ್, ಅಮಿತ್ ಇದ್ದರು.