ಶಹಾಬಾದ: ಸಮೀಪದ ಹೊನ್ನಕಿರಣಗಿ ಗ್ರಾಪಂ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳsÀವಾರದಂದು ನಡೆದ ಚುನಾವಣೆಯಲ್ಲಿ ಗ್ರಾಪಂ ಅಧ್ಯಕ್ಷರಾಗಿ ಮಲ್ಲಿನಾಥ ಕಲ್ಯಾಣಪ್ಪ ಭೂಸಾ ಹಾಗೂ ಉಪಾಧ್ಯಕ್ಷೆಯಾಗಿ ಮೋನಮ್ಮ ಬಸವಂತರಾಯ ಭಜಂತ್ರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 14 ಜನ ಸದಸ್ಯರನ್ನು ಒಳಗೊಂಡ ಹೊನ್ನ ಕಿರಣಗಿ ಗ್ರಾಮ ಪಂಚಾಯಿತಿಗೆ 3ಬಿ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿನಾಥ ಕಲ್ಯಾಣಪ್ಪ ಭೂಸಾ ,ಉಪಾಧ್ಯಕ್ಷ ಸ್ಥಾನ ಸಾಮನ್ಯ ವರ್ಗಕ್ಕೆ ಮೀಸಲಾದ ಸ್ಥಾನಕ್ಕೆ ಮೋನಮ್ಮ ಬಸವಂತರಾಯ ಭಜಂತ್ರಿ ನಾಮಪತ್ರವ ಸಲ್ಲಿಸಿದರು.ಪ್ರತಿಸ್ಪರ್ಧಿಯಾಗಿ ಯಾರು ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷರಾಗಿ ಮಲ್ಲಿನಾಥ ಕಲ್ಯಾಣಪ್ಪ ಭೂಸಾ ಹಾಗೂ ಉಪಾಧ್ಯಕ್ಷರಾಗಿ ಮೋನಮ್ಮ ಬಸವಂತರಾಯ ಭಜಂತ್ರಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಾಬುರಾವ ಪಾಟೀಲ ತಿಳಿಸಿದರು.
ಅಧ್ಯಕ್ಷರಾಗಿ ಮಲ್ಲಿನಾಥ ಕಲ್ಯಾಣಪ್ಪ ಭೂಸಾ ಹಾಗೂ ಉಪಾಧ್ಯಕ್ಷೆಯಾಗಿ ಮೋನಮ್ಮ ಬಸವಂತರಾಯ ಭಜಂತ್ರಿ ಅವಿರೋಧವಾಗಿ ಆಯ್ಕೆಯಾದಂತೆ ಮುಖಂಡರು ಹಾಗೂ ಬೆಂಬಲಿತ ಕಾರ್ಯಕರ್ತರು ಪಟಾಕಿ ಸಿಡಿಸಿ, ಗುಲಾ ಎರಚಿ, ಸಿಹಿ ಹಂಚಿ ಸಂಭ್ರಮಿಸಿದರು.ಗ್ರಾಮದಲ್ಲಿ ಗೆಲುವಿನ ಮೆರವಣಿಗೆ ನಡೆಸಿದರು.
ಮುಖಂಡರಾದ ಪಂಕ್ಷಾಕ್ಷರಿ.ಕೆ.ಹಿರೇಮಠ,ಶರಣಪ್ಪ ಭೂಸಾ,ಅನೀಲಕುಮಾರ ಕೋಣಿನ್,ಶಿವಕುಮಾರ ತುಪ್ಪದ್,ಶರಣಪ್ಪ ಹೀರಣ್ಣಿ, ಭಾಗಣ್ಣ ಹೊಸಮನಿ, ಪ್ರಭು ನಂಬಿ,ಬಸವರಾಜ ಕೊಡ್ಲಹಂಗರಗಿ,ಹಣಮಂತರಾಯ ಮಂದೆವಾಲ,ರಾಮು ಕಾಬಾ, ವಿಶ್ವನಾಥ ಬೆಳಗುಂಪಿ,ಬಾಬು ದಸರಗೋಳ, ಮಲ್ಲಿನಾಥ ತುಪ್ಪದ್,ವಿರೇಶ ತತ್ತಿ,ಚಂದ್ರಕಾಂತ ಹಿರಕೂರ್,ಲಕ್ಷ್ಮಣ ಭಜಂತ್ರಿ, ವಿರೂಪಾಕ್ಷಿ ಹಿರಣ್ಣಿ,ಶರಣಪ್ಪ ಆಲಮೇಲ್,ಲಕ್ಷ್ಮಣ.ಡಿ.ಭಜಂತ್ರಿ, ಗುರುಬಸಪ್ಪ ಸಜ್ಜನಶೆಟ್ಟಿ ಇತರರು ಇದ್ದರು.