ಶಹಾಬಾದ: ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾಪಂಯಲ್ಲಿ ಗುರುವಾರ ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಿರ್ಮಲಾ ಶಿವರಾಜ ಮತ್ತು ಉಪಾಧ್ಯಕ್ಷರಾಗಿ ಬೆಳ್ಳಪ್ಪ ಅರ್ಜುನ ಖಣದಾಳ ಆಯ್ಕೆಯಾಗಿದ್ದಾರೆ.
ತೊನಸನಹಳ್ಳಿ(ಎಸ್) ಗ್ರಾಪಂ ತೊನಸನಹಳ್ಳಿ, ತರನಳ್ಳಿ ಹಾಗೂ ಗೋಳಾ(ಕೆ) ಗ್ರಾಮಗಳನ್ನು ಒಳಗೊಂಡಿದ್ದು, ಒಟ್ಟು 22 ಸದಸ್ಯರ ಬಲವನ್ನು ಹೊಂದಿದೆ. ಪರಿಶಿಷ್ಟ ಜಾತಿ ಮಹಿಳೆ ಸ್ಥಾನಕ್ಕೆ ಮೀಸಲಾಗಿದ್ದ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ನಿರ್ಮಲಾ ಶಿವರಾಜ ಮತ್ತು ರಮಾಬಾಯಿ ಸಿದ್ರಾಮಪ್ಪ ನಾಮಪತ್ರ ಸಲ್ಲಿಸಿದರೇ, ಸಾಮನ್ಯ ಸ್ಥಾನಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬೆಳ್ಳಪ್ಪ ಅರ್ಜುನ ಖಣದಾಳ ಮತ್ತು ಉಮಾದೇವಿ ಶಂಕರಲಿಂಗ ನಾಮಪತ್ರ ಸಲ್ಲಿಸಿದರು.
ನಿರ್ಮಲಾ ಶಿವರಾಜ 15 ಮತಗಳನ್ನು ಮತ್ತು ಉಪಾಧ್ಯಕ್ಷ ಬೆಳ್ಳಪ್ಪ ಅರ್ಜುನ ಖಣದಾಳ 15 ಮತ ಪಡೆದು ಗೆಲುವನ್ನು ಸಾಧಿಸಿದರೇ, ಅಧ್ಯಕ್ಷ ಸ್ಥಾನದ ಪ್ರತಿಸ್ಪರ್ಧಿ ರಮಾಬಾಯಿ ಸಿದ್ರಾಮಪ್ಪ 7 ಮತಗಳನ್ನು ಹಾಗೂ ಉಪಾಧ್ಯಕ್ಷ ಸ್ಥಾನದ ಪ್ರತಿಸ್ಪರ್ಧಿ ಉಮಾದೇವಿ ಶಂಕರಲಿಂಗ 7 ಮತಗಳನ್ನು ಪಡೆದು ಸೋಲನ್ನುಭವಿಸಿದ್ದಾರೆ ಎಂದು ಚುನಾವಣಾಧಿಕಾರಿ ತಾ. ಪಂ ಕಾರ್ಯನಿರ್ವಹಣಾಧಿಕಾರಿಯಾದ ಮಲ್ಲಿನಾಥ ರಾವೂರ ತಿಳಿಸಿದ್ದಾರೆ.
ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಸೇರಿ ಪಟಾಕಿ ಸಿಡಿಸಿ, ಗುಲಾಲ್ಎರಚಿ, ಸಿಹಿ ಹಂಚಿಕೊಳ್ಳುವ ಮೂಲಕವಿಜಯೋತ್ಸವ ಆಚರಿಸಿದರು.
ಮುಖಂಡರಾದ ಮರಿಯಪ್ಪ ಹಳ್ಳಿ, ಅಪ್ಪುಗೌಡ ತರನಳ್ಳಿ, ಅಜೀತಕುಮಾರ ಪಾಟೀಲ ಮರತೂರ, ಹಣಮಂತ ಕೊಂಡಯ್ಯ, ಮೀರಲಿ ನಾಗೂರೆ, ದೇವೆಂದ್ರ ಕಾರೊಳ್ಳಿ,ಬಸವರಾಜ ಮದ್ರಿಕಿ, ಮಹಾಲಿಂಗ ಪೂಜಾರಿ,ನಾಗರಾಜ ಕರಣಿಕ್,ಶರಣು ಪೂಜಾರಿ,ಸಮೀರ ಗೋಳಾ, ಗ್ರಾಪಂ ಸದಸ್ಯರಾದ ಮಲ್ಲಣ್ಣ ಮರತೂರ,ಬಸವರಾಜ ಗೊಳೇದ್,ಮಹ್ಮದ್ ಫಯಾಜ್,ಸಿದ್ದು ಸಜ್ಜನ್,ಮುತ್ತಮ್ಮ ಮರತೂರ, ಅವಿನಾಶ ಕೊಂಡಯ್ಯ, ಹಣಮಂತ ಶಾಲಿ ಸೇರಿದಂತೆ ಅನೇಕರು ಇದ್ದರು.