ಕಲಬುರಗಿ: ಚಿತ್ತಾಪೂರ ತಾಲೂಕಿನ ಗುಂಡಗುರ್ತಿ ಗ್ರಾಮ ಪಂಚಾಯತ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಂಪೂರ್ಣ ಶ್ರೀನಿವಾಸ ಬಣ್ಣಕ್ಕಿ ಗುಂಡಗುರ್ತಿ ಹಾಗೂ ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಬಿರಾದಾರ್ ಮತ್ತಿಮಡು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಾಜಿ ಜಿ.ಪಂ ಸದಸ್ಯರಾದ ಶಂಭುಲಿಂಗ ಗುಂಡಗುರ್ತಿ, ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಸುನೀಲ ದೊಡ್ಡಮನಿ,ಮಾಜಿ ತಾಲೂಕ ಪಂಚಾಯತ ಸದಸ್ಯರಾದ ಬಸವರಾಜ ಹೊಸಳ್ಳಿ, ಭಾರತೀಯ ದಲಿತ ಪ್ಯಾಂಥರ ರಾಜ್ಯಾಧ್ಯಕ್ಷರಾದ ಮಲ್ಲಪ್ಪ ಹೊಸಮನಿ, ಮುಗುಟಾ ಕಾಂಗ್ರೆಸ ಮುಖಂಡರಾದ ಯಲ್ಲಾಲಿಂಗ ಬೆಂಕಿ,ಮಾಜಿ ಗ್ರಾಂಪಂ ಅಧ್ಯಕ್ಷರಾದ ಮಾಣಿಕ ಸಿಂಧೆ ಹಾಗೂ ಮಾಣಿಕ ಸಂಗನ,ತಿಪ್ಪಣ್ಣ ಹುಣಚಿಕರ ಹಾಗೂ ಗ್ರಾಮ ಪಂಚಾಯತ ಸರ್ವ ಸದಸ್ಯರು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.