ಶಹಾಪುರ: ಇಲ್ಲಿನ ಬಸವ ಮಾರ್ಗ ಪ್ರತಿಷ್ಠಾನದ ಆಶ್ರಯದಲ್ಲಿ ಪ್ರತಿ ತಿಂಗಳು ನಡೆಯುವ ಬಸವ ಬೆಳಕು -90 ಕಾರ್ಯಕ್ರಮ ಪಟ್ಟಣದ ಬಸವ ಮಾರ್ಗ ಕಚೇರಿಯಲ್ಲಿ ಆ. 25ರಂದು ಸಂಜೆ 6.30ಕ್ಕೆ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಹಾಗೂ ಸಂಚಾಲಕ ಶಿವಣ್ಣ ಇಜೇರಿ ತಿಳಿಸಿದ್ದಾರೆ.
ಲಿಂ.ಶರಣಬಸಪ್ಪ ಹೊನ್ಕಲ್ ಅವರ 5ನೇ ಸ್ಮರಣೋತ್ಸವ ನಿಮಿತ್ತ ನಡೆಯಲಿರುವ ಈ ಕಾರ್ಯಕ್ರಮವು ವಿಶ್ವಗುರು ಬಸವಣ್ಣ ನವರ ದಿವ್ಯ ಸಾನ್ನಿಧ್ಯದಲ್ಲಿ ಜರುಗಲಿದೆ. ಕಾಂತಮ್ಮ ಶರಣಬಸಪ್ಪ ಹೊನ್ಕಲ್ ಜ್ಯೋತಿ ಬೆಳಗಿಸಲಿದ್ದು, ಡಾ. ಚಂದ್ರಶೇಖರ ಸುಬೇದಾರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇವೇಳೆಯಲ್ಲಿ ಲೇಖಕ ಸಿದ್ಧರಾಮ ಹೊನ್ಕಲ್ ಅವರು ಬರೆದ “ಮೂರು ದೇಶ ನೂರೊಂದು ನೆನಪು”, ಮಾನಯ್ಯ ಗೋನಾಲರು ಬರೆದ “ಹೊನ್ಕಲ್ ರ ಕಥಾ ಲೋಕ” ಕೃತಿ ಜನಾರ್ಪಣೆಗೊಳ್ಳಲಿದ್ದು, ಹಿರಿಯ ಲೇಖಕ ಡಾ. ಕಾಶಿನಾಥ ಅಂಬಲಗಿ ಬಿಡುಗಡೆ ಮಾಡಲಿದ್ದಾರೆ. ಪುಸ್ತಕಗಳ ಕುರಿತು ಶರಣ ಮಾರ್ಗ ಸಂಪಾದಕ ಶಿವರಂಜನ್ ಸತ್ಯಂಪೇಟೆ ಮಾತನಾಡಲಿದ್ದಾರೆ. ಶಹಾಪುರ ತಾಲ್ಲೂಕು ಕಸಾಪ ಅಧ್ಯಕ್ಷ ಸಿದ್ಧಲಿಂಗಪ್ಪ ಆನೇಗುಂದಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದೇವೇಳೆಯಲ್ಲಿ ಮಾನಯ್ಯ ಗೋನಾಲ ಅವರನ್ನು ಸನ್ಮಾನಿಸಲಾಗುವುದು. ಶರಣ ಲಿಂಗಣ್ಣ ಸತ್ಯಂಪೇಟೆ ವೇದಿಕೆಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸತ್ಯಂಪೇಟೆ ಸಹೋದರರು ಕೋರಿದ್ದಾರೆ.