ಕಲಬುರಗಿ: ಪ್ರಚೋಧನಾಕಾರಿ ಭಾಷಣ ಮಾಡುವವರಿಗೆ ಒದ್ದು ಒಳಗೆ ಹಾಕಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಚಿತ್ತಾಪುರ ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಚಿತ್ತಾಪುರಕ್ಕೆ ಬಂದು ಪ್ರಚೋಧನಾಕಾರಿ ಭಾಷಣ ಮಾಡುವವರು ದೊಡ್ಡ ಕ್ರಾಂತಿಕಾರಿಗಳಾಗಿದ್ದಾರೇ. ಪೊಲೀಸರಿಗೆ ಕಾನೂನು ಇದೇ ಕೆಲವು ರೋಲ್ಸ್’ಗಳು ಇವೆ ಅದರ ಪ್ರಕಾರವೇ ಕ್ರಮಕೈಗೊಂಡು, ಕೂಡಲೇ ರೌಡಿಶಿಟರ್’ಗಳಿಗೂ ಕಂಟ್ರೋಲ್ ಮಾಡಿ ಎಂದು ಹೇಳಿದರು.