ಕಲಬುರಗಿ: ಅಫಜಲಫೂರ ತಾಲೂಕಿನ ಬಸನಾಳ ಗ್ರಾಮದಲ್ಲಿ ಚಂದ್ರಕಾಂತ ಡಿ ಶಕಾಪೂರ ಅವರ ಅಧ್ಯಕ್ಷತೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಅನಾವರಣ ಮಾಡಲಾಯಿತು.
ಈ ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪಾ ಕಮಕನೂರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಾವೇರಿಯ ಶಾಂತಬಭೀಷ್ಮಚೌಡಯ್ಯ ಮಹಾಸ್ವಾಮಿಗಳು, ಮಲ್ಲಣಪ್ಪ ಸ್ವಾಮೀಜಿಗಳು ತೊನಸನಳ್ಳಿ, ಶಾಸಕ ಎಂ ವೈ ಪಾಟೀಲ್, ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್, ಕೋಲಿ ಸಮಾಜದ ಮುಖಂಡರಾದ ಅವ್ವಣ್ಣಾ ಮ್ಯಾಕೆರಿ, ಮಹಾಂತೇಶ ಪಾಟೀಲ, ಜೇಟ್ಟೆಪ್ಪ ಶಕಾಪೂರ, ಭೀಮಾಶಂಕರ, ನಿಂಗಪ್ಪ ಅಂಕಲಗಿ ಸೇರಿದಂತೆ ಮುಖಂಡರು ಇದ್ದರು.