ಕಲಬುರಗಿ: ರಾಷ್ಟ್ರೀಯ ಸಮಾಜ ಪಕ್ಷ ಕಲಬುರಗಿ ಕಚೇರಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷ ಸ್ಪರ್ಧಿಸಲಿದೆ ಕಲಬುರಗಿ, ಬೀದರ್, ರಾಯಚೂರು ಸೇರಿದಂತೆ ರಾಜ್ಯದ ಇತರೆ ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧಿಸಲಿದೆ ಈಗಾಗಲೇ ಪಕ್ಷದ ಕಾರ್ಯಕರ್ತರ ಪಟ್ಟಿ ತಯಾರಿಕೆ ಕುರಿತು ಸಮಾಲೋಚನೆ ಸಭೆ ಜರುಗಿತು ಎಂದು ರಾಷ್ಟ್ರೀಯ ಸಮಾಜ ಪಕ್ಷದ (ಆರ್ಎಸ್ಪಿ) ರಾಷ್ಟ್ರೀಯ ಉಪಾಧ್ಯಕ್ಷರಾದ ಶಿವಲಿಂಗಪ್ಪ ಕೆನ್ನೂರು ಹೇಳಿದರು.
ನಗರದ ರಾಷ್ಟ್ರೀಯ ಸಮಾಜ ಪಕ್ಷದ ಕಚೇರಿಯಲ್ಲಿ ಸೋಮವಾರ ವಿವಿಧ ತಾಲೂಕು ಘಟಕಗಳ ಪದಾಧಿಕಾರಿಗಳ ಸೇರಿದಂತೆ ಹೊಸದಾಗಿ ರಾಷ್ಟ್ರೀಯ ಸಮಾಜ ಪಕ್ಷಕ್ಕೆ ಸೇರ್ಪಡೆಗೊಂಡ ಅಂಬಿಕಾ ಎಸ್ ಬಂಡಗಾರ, ವಿಜಯಕುಮಾರ ಬೋರಗಿ, ಲಕ್ಷ್ಮಣ ಪಟ್ಟೆದಾರ , ಮಲ್ಲಿಕಾರ್ಜುನ ಹುಡುಗಿಕರ್ , ಸೈಬಣ್ಣ ಅರಳಗುಂಡಗಿ, ಕಾರ್ಯಕರ್ತರಿಗೆ ಗೌರವಿಸಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಈ ಪೂರ್ವಭಾವಿ ಸಭೆಯಲ್ಲಿ ಶರಣಬಸಪ್ಪ ದೊಡ್ಮನಿ, ಮನುಬಾಯಿ ಮುಕ್ಕಾ, ಶರಣಪ್ಪ ಪೂಜಾರಿ, ದೇವೇಂದ್ರ ಚಿಗರಳ್ಳಿ, ಶ್ರೀಮಂತ ಮಾವನೂರ, ಲಕ್ಷ್ಮಣ ಪಟ್ಟೆದಾರ, ರಮೇಶ ಶಾಹಾಬಾದ, ಬಿಎಂ ರಾವೂರ್, ಬಿವಿ ಕಟ್ಟಿಮನಿ, ಮಾದೇವಿ ದೊಡ್ಮನಿ ಇದ್ದರು.