ಕೊಪ್ಪಳ: ಜಿಲ್ಲೆಯಲ್ಲಿ ಮತ್ತೊಂದು ವಿದ್ಯುತ್ ಅವಘಢ, ರಾಶಿ ಮಾಡಲು ಹೊಲಕ್ಕೆ ತೆರಳಿದ್ದ ವೇಳೆ ಹರಿದು ಬಿದ್ದ ವಿದ್ಯುತ್ ವೈರ್ ತಂದೆ ಹಾಗೂ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ನಡೆದಿದೆ.
ಕುಷ್ಟಗಿ ತಾಲುಕಿನ ಚಳಗೇರಿ ಗ್ರಾಮದಲ್ಲಿ ಈ ಧಾರುಣ್ಯ ಘಟನೆ ನಡೆದಿದ್ದು, ಹನುಮಪ್ಪ ಬೀರಪ್ಪನವರ (30) ಮಕ್ಕಳಾದ ಪ್ರಿಯಾಂಕ(4), ಬೀರಪ್ಪ(2) ಸ್ಥಳದಲ್ಲೆ ಸಾವನಪ್ಪಿದ್ದಾರೆ.
ಚಳಗೇರಿಯ ಹೊರವಲಯದ ಹತ್ತಿರ ಟ್ರಾಕ್ಟರ್ ಮೂಲಕ ರಾಶಿ ಮಾಡಲು ಹೊಲಕ್ಕೆ ತೆರಳಿದಾಗ, ಟ್ರಾಕ್ಟರ್ ಮೇಲೆ ಹರಿದು ಬಿದ್ದ ವಿದ್ಯುತ್ ತಂತಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಘಟನೆ ಕುಷ್ಟಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.