ಕಲಬುರಗಿ: ನಗರದ ಹೊರ ವಲಯದ ರಾಜಾಪುರ ಬಡಾವಣೆಯಲ್ಲಿ ಇಂದು ಬೆಳಗ್ಗೆ ಮಕ್ಕಳು ಕಳ್ಳರು ಬಂದಿದ್ದಾರೆ ವಿಷಯ ತಿಳಿದು ಜನ ಬೆಚ್ಚಿ ಬಿದ್ದಿದ್ದಾರೆ.
ಟವೆರಾ ವಾಹನದಲ್ಲಿ ಐದಾರು ಜನ ಬಂದಿದ್ದು, ವಾಹನದಲ್ಲಿ ಮುಖ ವಸ್ತ್ರ, ಹಗ್ಗ ಇತ್ಯಾದಿಗಳು ಇದ್ದವು ಎಂದು ಪ್ರತ್ಯೇಕ್ಷದರ್ಶಿಗಳು ಇ ಮಿಡಿಯಾಕ್ಕೆ ತಿಳಿಸಿದ್ದಾರೆ. ಅನುಮಾನ ಬಂದ ಅಲ್ಲಿನ ಜನತೆ ಅವರನ್ನು ಹಿಡಿಯಲು ಬೆನ್ನು ಹತ್ತಿದಾಗ ಇಬ್ಬರು ಪಾರಾಗಿದ್ದಾರೆ. ಮೂರವನ್ನು ವಿವಿ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಅವರು ತಿಳಿಸಿದರು.
ಆನಂತರ ಸ್ಥಳಕ್ಕೆ ಬಂದ ಪೊಲೀಸರು ಸಾರ್ವಜನಿಕರನ್ನು ವಿಚಾರಿಸಲಾಗಿದೆ ಅದೇ ವದಂತಿಯ ಬಗ್ಗೆ ಮಾತನಾಡಿದರಲ್ಲದೆ, ಅನುಮಾನಾಸ್ಪದವಾಗಿ ಕಂಡು ಬಂದ ಮೂವರನ್ನು ನಿಮ್ಮ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಅಲ್ಲಿನ ಜನತೆ ತಿಳಿಸಿದಾಗ ಪೊಲೀಸರು ಮತ್ತೆ ಠಾಣೆಯತ್ತ ಧಾವಿಸಿದರು.
ಅವರು ಮಕ್ಕಳ ಕಳ್ಳರೋ? ಅಥವಾ ಜನರಿಗೆ ಅನುಮಾನ ಬಂದು ಹಿಡಿದಿದ್ದಾರೋ ಎನ್ನುವುದನ್ನು ಪೊಲೀಸರು ಪತ್ತೆ ಹಚ್ಚಬೇಕಾಗಿದೆ.