ಕಲಬುರಗಿ: ಕಲಬುರಗಿಯಿಂದ ಬೆಂಗಳೂರುರಿಗೆ ಹೊರಟಿದ್ದ ಖಾಸಗಿ ಕಂಪನಿಯ ವಿ.ಆರ್.ಎಲ್ ಬಸ್ ಹಳ್ಳಕ್ಕೆ ಉರುಳಿ ಓರ್ವ ಮೃತಪಟ್ಟಿರುವ ಘಟನೆ ಶಹಾಪುರ ತಾಲ್ಲೂಕಿನ ಹತ್ತಿಗುಡೂರ ಹತ್ತಿರ ರವಿವಾರ ರಾತ್ರಿ ನಡೆದಿದೆ.
ಕಲಬುರಗಿ ಪಟ್ಟಣದ ಹಳೆ ಸುಲ್ತಾಪುರ ನಿವಾಸಿ ಮೌನೇಶ್ ತಂದೆ ಶಿವಪ್ಪ (35) ಮೃಪಟ್ಟ ದುರ್ದೈವಿ ಯಾಗಿದ್ದು, ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಗುರು ಶಾಂತಪ್ಪ ತಂದೆ ಸುಭಾಷ್ ಚಂದ್ರ ಕುಂಬಾರ್, ನೀಲಗಂಗಮ್ಮ ಭೀಮಶಂಕರ್, ಮಹಾಲಕ್ಷ್ಮಿ ರಾಘವೇಂದ್ರ, ಗೀತಾ ರಾಜಶೇಖರ್, ಹಣಮಂತ ಶರಣಪ್ಪ, ವಿಜಯಲಕ್ಷ್ಮಿ ಶರಣಗೌಡ, ಶಿವ ಶಂಕರ್ ವಿಜಯಕುಮಾರ್ ಸೇರಿ 7 ಜನರಿಗೆ ಗಾಯಗಳಾಗಿವೆ.
ರಾತ್ರಿ ವೇಳೆಯಲ್ಲಿ ಶಹಾಪುರ ತಾಲ್ಲೂಕಿನಿಂದ ಸುರಪುರ ಮಾರ್ಗದ ನಡುವೆ ವಿ.ಆರ್.ಎಲ್ ಚಾಲಕ ಅತೀ ವೇಗವಾಗಿ ಅಲಕ್ಷತನದಿಂದ ಚಾಲಾಯಿಸಿ ಬಸ್ ಕಂದಕಕ್ಕೆ ಊರುಳಿದೆ ಎಂದು ತಿಳಿದುಬಂದಿದೆ.
ಈ ಕುರಿತು ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.