ಶಹಾಬಾದ :ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾ.ಪಂಯ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಸಿದ್ದು ಸಜ್ಜನ ಅವಿರೋಧ ಆಯ್ಕೆಯಾಗಿದ್ದಾರೆ.
ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಈ ಹಿಂದಿನ ಉಪಾಧ್ಯಕ್ಷ ಬೆಳಪ್ಪ ಖಣದಾಳ ಅವರ ರಾಜೀನಾಮೆ ಸಲ್ಲಿಸಿದ್ದರಿಂದ ಉಪಾಧ್ಯಕ್ಷ ಸ್ಥಾನ ತೆರವಾಗಿತ್ತು.
ಉಪಾಧ್ಯಕ್ಷ ಸ್ಥಾನಕ್ಕೆ ಸಿದ್ದು ಮಲ್ಲೇಶಪ್ಪ ಸಜ್ಜನ ವಿರುದ್ಧವಾಗಿ ಯಾರು ನಾಮಪತ್ರ ಸಲ್ಲಿಸಲಿಲ್ಲ. ಗ್ರಾಪಂ 22 ಸದಸ್ಯ ಬಲದಲ್ಲಿ ಒಬ್ಬರು ಮರಣ ಹೊಂದಿದ್ದು, 21ಸದಸ್ಯರನ್ನು ಒಳಗೊಂಡ ಇಲ್ಲಿನ ಗ್ರಾಮ ಪಂಚಾಯತ ಉಪಾಧ್ಯಕ್ಷ ಸ್ಥಾನಕ್ಕೆ ಸಿದ್ದು ಮಲ್ಲೇಶಪ್ಪ ಸಜ್ಜನ ಅವಿರೋಧವಾಗಿ ಆಯ್ಕೆಯಾದರು.
ಚುನಾವಣೆ ಅಧಿಕಾರಿಯಾಗಿದ್ದ ತಾಲೂಕ ತಹಶೀಲ್ದಾರ್ ಜಗದೀಶ್ ಚೌರ ಅವರ ಸಮ್ಮುಖದಲ್ಲಿ ಜರುಗಿತು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಸಿದ್ರಾಮಪ್ಪ ಪಾಟೀಲ, ಮಲ್ಲಣ್ಣ ಮರತೂರ, ಮೀರ ಅಲಿ ನಾಗೂರೆ, ಹಣಮಂತ ಸಾಲಿ, ಅವಿನಾಶ, ಹಣಮಂತ ಕೊಂಡಯ್ಯ, ಬೆಳಪ್ಪ ಖಣದಾಳ, ಬಾಲಿಕಾ ಶರಣಪ್ಪ ಸೇರಿದಂತೆ ಅನೇಕರು ಇದ್ದರು.