ಶಹಾಬಾದ: ನಿರುದ್ಯೋಗ ಸಮಸ್ಯೆಯಿಂದ ನಮ್ಮ ಯುವಜನತೆ ಇಂದು ದಾರಿ ತಪ್ಪುತ್ತಿದೆ ಇದರ ವಿರುದ್ಧ ಇದರ ವಿರುದ್ದ ಸಂಘಟಿತ ಆಂದೋಲನ ಕಟ್ಟಬೇಕೆಂದು ಎಂದು ಎಐಡಿವೈಒ ಜಿಲ್ಲಾ ಅಧ್ಯಕ್ಷ ಜಗನ್ನಾಥ.ಎಸ್.ಹೆಚ್ ಹೇಳಿದರು.
ಅವರು ಎಐಡಿವೈಓ ಸ್ಥಳಿಯ ಸಮಿತಿಯ 59ನೇ ಸಂಸ್ಥಾಪನಾ ದಿನದ ಅಂಗವಾಗಿ ನಗರದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಷಣಕಾರರಾಗಿ ಮಾತನಾಡಿದರು.
ದೇಶದಲ್ಲಿ ಶೇಕಡ್ 60 ಕ್ಕಿಂತ ಹೆಚ್ಚು ಯುವಜನತೆಯನ್ನು ಹೊಂದಿದೆ, ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯಲು ಮಹತ್ವದ ಪಾತ್ರ ವಹಿಸುತ್ತಾರೆ. ಆದರೆ ಇಂದು ಯುವ ಸಮುದಾಯ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನಿರುದ್ಯೋಗ ಸಮಸ್ಯೆಯಿಂದ ನಮ್ಮ ಯುವಜನತೆ ಇಂದು ದಾರಿ ತಪ್ಪುತ್ತಿದೆ.ನಮ್ಮ ದೇಶದಲ್ಲಿ ನಲವತ್ತೈದು ವರ್ಷಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ದಾಖಲೆಯನ್ನು ಮುಟ್ಟಿದ್ದು, ಇದರ ವಿರುದ್ದ ಸಂಘಟಿತ ಆದೋಲನ ಕಟಬೇಕಾಗಿದೆ.
ಕೇಂದ್ರ ಮತ್ತು ರಾಜ್ಯ ಸರಕಾರದ ಇಲಾಖೆಗಳಲ್ಲಿ ಲಕ್ಷಂತಾರ ಹುದ್ದೆಗಳನ್ನು ಮೊಟುಕುಗೊಳಿಸುವ ಕೆಲಸ ನಿರಂತರವಾಗಿ £ಡಯುತ್ತದೆ.ಇನ್ನೊಂದು ಕಡೆ ಅಲ್ಪ ಸ್ವಲ್ಪ ಖಾಯಂ ನೇಮಕಾತಿ ನಡೆದರು ಅಲ್ಲಿ ಭ್ರಷ್ಟಚಾರ ತಾಂಡವಾಡುತ್ತದೆ, ಜೊತೆಗೆÀ ರಾಜ್ಯ ಸರಕಾರ ನಿವೃತಿಹೊಂದಿದವರಿಗೆ ಉದೋಗದಲ್ಲಿ ಮುಂದುವರಿಸುವುದನ್ನು ನಿಲ್ಲಿಸಿ ಯುವಕರಿಗೆ ಅವಕಾಶಕೋಡಬೇಕೆಂದರು, ಮತ್ತು ದೇಶದಲ್ಲಿ ನಡೆದ ನೀಟ್ ಹಾಗೂ ನೆಟ್ ಪರೀಕ್ಷೇ ಸೊರಿಕೆ ಆಗಿದ್ದು ವಿಶಾದ ಸಂಗತಿ ಎಂದು ಅವರು ಇಡೀ ದೇಶದ ಯುವಕರು ಸಂಘಟಿತರಾಗಿ ಯಾವ ರೀತಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾನ್ ಕ್ರಾಂತಿಕಾರಿಗಳು ಸಾಮ್ರಾಜ್ಯಶಾಹಿ ಬ್ರಿಟಿμï ಆಡಳಿತದ ವಿರುದ್ಧ ಹೋರಾಡಿ ತ್ಯಾಗ ಬಲಿದಾನ ಮಾಡಿದ ಭಗತ್ಸಿಂಗ್, ನೇತಾಜಿ ಸುಭಾμïಚಂದ್ರ ಬೋಸ್, ಚಂದ್ರಶೇಖರ್ ಆಜಾದ್ ಅವರ ಜೀವನ ಹೋರಾಟದಿಂದ ಸ್ಪೂರ್ತಿ ಪಡೆದು ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ದ ನಾÀವು ಒಂದಾಗಿ ಹೋರಾಡಬೇಕಾಗಿದೆ ಎಂದರು.ಈ ಕಾರ್ಯಕ್ರಮದ ವೇದಿಕೆಮೆಲೆ ಅದ್ಯಕ್ಷರಾದ ರಘು ಪವಾರ, ಕಾರ್ಯದರ್ಶಿ ರಮೇಶ ದೇವಕರ್, ಹಾಗೂ ಸಿದ್ದು ಚೌದಿ ಉಪಸ್ಥಿತಿರಿದ್ದರು.
ಅದ್ಯಕ್ಷತೆಯನ್ನು ಸದಸ್ಯರಾದ ತೇಜಸ್ ಇಬ್ರಾಹಿಂಪುರ ವಹಿಸಿದ್ದರು. ಮಲ್ಲಿಕಾರ್ಜುನ್, ಆನಂದ ದಂಡಗುಲಕರ್, ರಾಕೇಶ ಪೋತನಕರ್, ಶಾಮರಾವ್ ಪವಾರ, ಮಲ್ಲು ದೊರೆ, ಅಜೇಯ ಸುಬೇದಾರ, ಲೈಕರಾ ದೋತ್ರೆ ಭಾಗವಹಿಸಿದ್ದರು,