ಕಲಬುರಗಿ: ಸ್ವಚ್ಛ ಭಾರತ ಹೊಂದುವುದು ದೇಶದ ಪ್ರತಿಯೊಬ್ಬ ಭಾರತೀಯನ ಕರ್ತವ್ಶ ಎಂದು ಮಾಜಿ ಶಾಸಕ ಹಾಗೂ ಕಲಬುರಗಿ ಜಿಲ್ಲಾ ಬಿಜೆಪಿ ಗ್ರಾಮೀಣ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದರು.
ಶಿವಾಜಿ ನಗರದಲ್ಲಿಂದು ಗಾಂಧಿ ಜಯಂತಿಯ ಪ್ರಯುಕ್ತ ಆಯೋಜಿಸಿದ್ದ ಸ್ವಚ್ಛ ಭಾರತ ಅಭಿಯಾನವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅಭಿಯಾನದಲ್ಲಿ ಸ್ವಚ್ಛ ಪರಿಸರ ಹೊಂದುವುದು ದೇಶದ ನಾಗರಿಕರ ಕರ್ತವ್ಶ. ದೇಶದ ಸ್ವಚ್ಛತೆ ಮತ್ತು ಅಖಂಡತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಾಗಿದೆ. ಪ್ರಧಾನಿಗಳ ಜೊತೆಗೆ ಇಡೀ ದೇಶ ಕೈಗೂಡಿಸಬೇಕು ಎಂದರು.
ಸಂಸದ ಡಾ. ಉಮೇಶ ಜಾಧವˌ ವಿಧಾನ ಪರಿಷತ್ ಸದಸ್ಶ ಬಿ.ಜಿ ಪಾಟೀಲ್ ಸೇರಿದಂತೆ ಬಿಜೆಪಿಯ ಶಾಸಕರುˌ ಮುಖಂಡರು ಪದಾಧಿಕಾರಿಗಳು ಭಾಗವಹಿಸಿದ್ದರು.