ಶರಣಬಸವೇಶ್ವರ ಸಂಸ್ಥಾನದಲ್ಲಿ ಶ್ರಾವಣ ಮಾಸ ನಿಮಿತ್ತ ಮಂಗಲೋತ್ಸವ

0
51

ಕಲಬುರಗಿ: ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠದಲ್ಲಿ ಕಳೆದ ಎರಡು ಶತಮಾನಗಳಿಂದ ನಿರಂತರವಾಗಿ ದಾಸೋಹ, ಗುರುಲಿಂಗ ಜಂಗಮ ಅರ್ಚನೆ, ಶಿವಾನುಭವ ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬಂದಿವೆ. ಇದು ಶರಣಬಸವೇಶ್ವರ ಸಂಸ್ಥಾನದಲ್ಲಿ ಹಿರಿಯ ಪೀಠಾಧಿಪತಿಗಳು ಹಾಕಿದ ಪರಂಪರೆಯಂತೆ ಎಲ್ಲಾ ಪೀಠಾಧಿಪತಿಗಳು ಮುಂದುವರೆಸಿ ಆಚರಿಸಿಕೊಂಡು ಬಂದಿದ್ದಾರೆ.

ಬಸವಣ್ಣನವರು ತಮ್ಮ ವಚನದಲ್ಲಿ ಹೇಳಿರುವಂತೆ “ಹೊತ್ತಾರೆ ಎದ್ದು ಅಗ್ಗವಣೆ ಪತ್ರಿಯತಂದು ಪೂಜಿಸುಲಿಂಗ” ಎಂದು ಮಹಾದಾಸೋಹ ಪೀಠದಲ್ಲಿ 8ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ, ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ 9ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರ ದಿವ್ಯಸಾನಿಧ್ಯದಲ್ಲಿ ತ್ರಿಕಾಲ ಪೂಜೆ, ಗುರುಲಿಂಗ ಜಂಗಮ ಪೂಜೆ, ಅನ್ನ ದಾಸೋಹ, ಪ್ರಸಾದ ಅರ್ಪಣೆ ಹಾಗೂ ಶಿವಾನುಭವ ಕಾರ್ಯಕ್ರಮಗಳು ಪವಿತ್ರ ಶ್ರಾವಣ ಮಾಸದಾದ್ಯಂತ ನಿತ್ಯವೂ ಜರುಗಿದವು.

Contact Your\'s Advertisement; 9902492681

ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರು ತಮ್ಮ ಕಿರಿ ವಯಸ್ಸಿನಲ್ಲಿಯೇ ನಡೆ, ನುಡಿ, ಭಕ್ತಿ, ಪೂಜೆ, ಕಾಯಕ, ದಾಸೋಹ ಮೈಗೂಡಿಸಿಕೊಂಡಿದ್ದಾರೆ. ಚಿರಂಜೀವಿಯವರ ನೇತೃತ್ವದಲ್ಲಿ ಶ್ರಾವಣದ ಪ್ರತಿನಿತ್ಯವೂ ಪಾದಪೂಜೆ, ಅನ್ನ ದಾಸೋಹ ನಿಯಮದಂತೆ ನಡೆದುಕೊಂಡು ಬಂದಿತು.

ಈ ಸಂಧರ್ಭದಲ್ಲಿ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರು ವಿಭೂತಿ, ರುದ್ರಾಕ್ಷಿ ಹಾಗೂ ಮಂತ್ರಗಳ ಮಹಿಮೆಯನ್ನು ಕುರಿತು ತಮ್ಮ ಭಕ್ತಿಯುತವಾಗಿ ಅರ್ಥಪೂರ್ಣವಾದ ಉಪನ್ಯಾಸ ನೀಡಿದರು.

ಇದಲ್ಲದೆ “ಕೋಟಿಗೊಬ್ಬ ಶರಣ, ಪರಶಿವನ ಹರಣ ಕಲಬುರಗಿಯ ಶ್ರೀ ಶರಣ ಬಸವನ ಮಾಡೋ ನೀ ಸ್ಮರಣ” ಎಂಬ ಭಕ್ತಿ ವಚನವನ್ನು ಅತಿ ಶ್ರದ್ಧೆಯಿಂದ ಹಾಡಿದ್ದು ನೆರೆದಂತಹ ಭಕ್ತಸಮೂಹಕ್ಕೆ ಹುಬ್ಬೇರಿಸುವಂತೆ ಮಾಡಿತು. ಎಲ್ಲರಿಗೂ ಭಕ್ತಿಲೋಕದ ದರುಶನಮಾಡಿಸಿ, ಶರಣಬಸವೇಶ್ವರರ ಸ್ಮರಣೆಯಲ್ಲಿ ಮುಳುಗುವಂತೆ ಮಾಡಿದ್ದು ವಿಶೇಷ.

ತದನಂತರ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಅವರ ಜೊತೆಗೂಡಿ ಶ್ರೀ ಶರಣಬಸವೇಶ್ವರರ ದೇವಸ್ಥಾನದಲ್ಲಿ ಪೂಜಾ ಪುನಸ್ಕಾರಗಳನ್ನು ಸಲ್ಲಿಸಿ, ಪಲ್ಲಕ್ಕಿ ಪೂಜೆ ಮಾಡಿ ಶ್ರಾವಣ ಮಾಸದ ಶಿವಾನುಭವ ಕಾರ್ಯಕ್ರಮಗಳಿಗೆ ಮಂಗಲೋೀತ್ಸವ ನೆರವೇರಿಸಿದರು. ಶರಣಬಸವೇಶ್ವರ ಸಂಸ್ಥಾನದಲ್ಲಿ ಜರುಗಿದ ಶ್ರಾವಣ ಮಾಸದ ಮಂಗಲೋತ್ಸವ.

ಕಲಬುರಗಿ: ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠದಲ್ಲಿ ಕಳೆದ ಎರಡು ಶತಮಾನಗಳಿಂದ ನಿರಂತರವಾಗಿ ದಾಸೋಹ, ಗುರುಲಿಂಗ ಜಂಗಮ ಅರ್ಚನೆ, ಶಿವಾನುಭವ ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬಂದಿವೆ. ಇದು ಶರಣಬಸವೇಶ್ವರ ಸಂಸ್ಥಾನದಲ್ಲಿ ಹಿರಿಯ ಪೀಠಾಧಿಪತಿಗಳು ಹಾಕಿದ ಪರಂಪರೆಯಂತೆ ಎಲ್ಲಾ ಪೀಠಾಧಿಪತಿಗಳು ಮುಂದುವರೆಸಿ ಆಚರಿಸಿಕೊಂಡು ಬಂದಿದ್ದಾರೆ.

ಬಸವಣ್ಣನವರು ತಮ್ಮ ವಚನದಲ್ಲಿ ಹೇಳಿರುವಂತೆ “ಹೊತ್ತಾರೆ ಎದ್ದು ಅಗ್ಗವಣೆ ಪತ್ರಿಯತಂದು ಪೂಜಿಸುಲಿಂಗ” ಎಂದು ಮಹಾದಾಸೋಹ ಪೀಠದಲ್ಲಿ 8ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ, ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ 9ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರ ದಿವ್ಯಸಾನಿಧ್ಯದಲ್ಲಿ ತ್ರಿಕಾಲ ಪೂಜೆ, ಗುರುಲಿಂಗ ಜಂಗಮ ಪೂಜೆ, ಅನ್ನ ದಾಸೋಹ, ಪ್ರಸಾದ ಅರ್ಪಣೆ ಹಾಗೂ ಶಿವಾನುಭವ ಕಾರ್ಯಕ್ರಮಗಳು ಪವಿತ್ರ ಶ್ರಾವಣ ಮಾಸದಾದ್ಯಂತ ನಿತ್ಯವೂ ಜರುಗಿದವು.

ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರು ತಮ್ಮ ಕಿರಿ ವಯಸ್ಸಿನಲ್ಲಿಯೇ ನಡೆ, ನುಡಿ, ಭಕ್ತಿ, ಪೂಜೆ, ಕಾಯಕ, ದಾಸೋಹ ಮೈಗೂಡಿಸಿಕೊಂಡಿದ್ದಾರೆ. ಚಿರಂಜೀವಿಯವರ ನೇತೃತ್ವದಲ್ಲಿ ಶ್ರಾವಣದ ಪ್ರತಿನಿತ್ಯವೂ ಪಾದಪೂಜೆ, ಅನ್ನ ದಾಸೋಹ ನಿಯಮದಂತೆ ನಡೆದುಕೊಂಡು ಬಂದಿತು.

ಈ ಸಂಧರ್ಭದಲ್ಲಿ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರು ವಿಭೂತಿ, ರುದ್ರಾಕ್ಷಿ ಹಾಗೂ ಮಂತ್ರಗಳ ಮಹಿಮೆಯನ್ನು ಕುರಿತು ತಮ್ಮ ಭಕ್ತಿಯುತವಾಗಿ ಅರ್ಥಪೂರ್ಣವಾದ ಉಪನ್ಯಾಸ ನೀಡಿದರು. ಇದಲ್ಲದೆ “ಕೋಟಿಗೊಬ್ಬ ಶರಣ, ಪರಶಿವನ ಹರಣ ಕಲಬುರಗಿಯ ಶ್ರೀ ಶರಣ ಬಸವನ ಮಾಡೋ ನೀ ಸ್ಮರಣ” ಎಂಬ ಭಕ್ತಿ ವಚನವನ್ನು ಅತಿ ಶ್ರದ್ಧೆಯಿಂದ ಹಾಡಿದ್ದು ನೆರೆದಂತಹ ಭಕ್ತಸಮೂಹಕ್ಕೆ ಹುಬ್ಬೇರಿಸುವಂತೆ ಮಾಡಿತು. ಎಲ್ಲರಿಗೂ ಭಕ್ತಿಲೋಕದ ದರುಶನಮಾಡಿಸಿ, ಶರಣಬಸವೇಶ್ವರರ ಸ್ಮರಣೆಯಲ್ಲಿ ಮುಳುಗುವಂತೆ ಮಾಡಿದ್ದು ವಿಶೇಷ.

ತದನಂತರ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಅವರ ಜೊತೆಗೂಡಿ ಶ್ರೀ ಶರಣಬಸವೇಶ್ವರರ ದೇವಸ್ಥಾನದಲ್ಲಿ ಪೂಜಾ ಪುನಸ್ಕಾರಗಳನ್ನು ಸಲ್ಲಿಸಿ, ಪಲ್ಲಕ್ಕಿ ಪೂಜೆ ಮಾಡಿ ಶ್ರಾವಣ ಮಾಸದ ಶಿವಾನುಭವ ಕಾರ್ಯಕ್ರಮಗಳಿಗೆ ಮಂಗಲೋೀತ್ಸವ ನೆರವೇರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here