ಅನುಭವಮಂಟಪ ದರ್ಶನ ಪ್ರವಚನ: ಉದ್ಘಾಟನಾ ಸಮಾರಂಭ ನಾಳೆ

0
108

ಬಸವಕಲ್ಯಾಣ: ವಿಶ್ವಬಸವಧರ್ಮ ಟ್ರಸ್ಟ ಅನುಭವಮಮಂಟಪ ನಿಮಿತ್ತ ೪೦ನೇ ಶರಣಕಮ್ಮಟ ಅನುಭವಮಂಟಪ ಉತ್ಸವ ನಿಮಿತ್ಯ ಅನುಭವಮಂಟಪ ದರ್ಶನ ಪ್ರವಚನ ಉದ್ಘಾಟನಾ ಸಮಾರಂಭ ನಾಳೆ ನ.೧೨ರಂದು ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಸಂಜೆ ೬ ಗಂಟೆಗೆ ಜರುಗಲಿದೆ ಎಂದು ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗಪಟ್ಟದ್ದೇವರು ತಿಳಿಸಿದ್ದಾರೆ.

Contact Your\'s Advertisement; 9902492681

ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ದಿವ್ಯ ಸನ್ನಿಧಾನ ವಹಿಸಲಿದ್ದಾರೆ. ಶ್ರೀನಿವಾಸ ಸರಡಗಿಯ ಶಕ್ತಿಪೀಠದ ಡಾ. ಅಪ್ಪಾರಾವದೇವಿ ಮುತ್ಯಾ ಸನ್ನಿಧಾನ ವಹಿಸಲಿದ್ದಾರೆ. ಅನುಭವ ಮಂಟಪದ ಸಂಚಾಲಕ ಶಿವಾಣಂದ ಮಹಾಸ್ವಾಮಿಗಳು ನೇತೃತ್ವ ವಹಿಸಲಿದ್ದಾರೆ. ನಿರಂಜನ ಮಹಾಸ್ವಾಮಿಗಳು ಪ್ರವಚನ ನೀಡಲಿದ್ದಾರೆ. ಪ್ರವಚನ ಕಾರ್ಯಕ್ರಮವನ್ನು ಶಾಸಕ ಬಿ. ನಾರಾಯಣ ಉದ್ಘಾಟಿಸಲಿದ್ದಾರೆ. ಬಸವೇಶ್ವರ ದೇವಸ್ಥಾನ ಪಂಚ ಕಮೀಟಿ ಅಧ್ಯಕ್ಷ ಅನಿಲ ರಗಟೆ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಧನರಾಜ ತಾಳಂಪಳ್ಳಿ ಬಸವಗುರುಪೂಜೆ ನೆರವೇರಿಸಲಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here