ಕಲಬುರಗಿ: ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಜ. ೨೧ ರಂದು ನಡೆದ ಸಮಾವೇಶವನ್ನು ಕಂಡು ಸಹಿಸದೆ ಮಾಧ್ಯಮದ ಮುಂದೆ ಕಿರುಚಾಡಿದ ಅಫಜಲಪುgದ ಮಾಜಿ ಶಾಸಕ ಮಾಲೀಕರಯ್ಯ ಗುತ್ತೇದಾರ ಅವರು ಹೇಳಿಕೆಗೆ ಖಂಡಿಸುತ್ತೇವೆ ಎಂದು ಕರ್ನಾಟಕ ಪೀಪಲ್ಸ್ ಫೋರಂ ಮುಖಂಡ ಮಾರುತಿ ಮಾನ್ಪಡೆ ಹೇಳಿದರು.
ಪತ್ರಿಕಾ ಭವನದಲ್ಲಿಂದು ಮಾತನಾಡಿ ಸ್ವಾತಂತ್ರ್ಯದ ನಂತರ ನಡೆದ ಸಮಾವೇಶವು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಮತ್ತು ಯಶಸ್ವಿಯಾಗಿದೆ. ಅಫಜಲಪುರ ಪಟ್ಟಣದಿಂದಲೇ ಸುಮಾರು ೨೦ ಸಾವಿರ ಜನ ಸಮಾವೇಶಕ್ಕೆ ಹೋಗಿದ್ದರು. ಅವರಿಗೆಲ್ಲ ದುಡ್ಡು ನೀಡಲಾಗಿದೆ ಎಂದು ಹೇಳಿರುವ ಮಾಲೀಕಯ್ಯ ಗುತ್ತೇದಾರ ಅಂತಹ ಸಂಸ್ಕೃತಿ ನಮ್ಮದಲ್ಲ. ಜನರು ಸ್ವಯಂ ಪ್ರೇರಣೆಯಿಂದ ಕಲಬುರಗಿ, ಯಾದಗಿರಿ, ರಾಯಚೂರ ಬೀದರ ಜಿಲ್ಲೆಗಳಿಂದ ಆಗಿಮಸಿದರು. ದುಡ್ಡು ಕೊಟ್ಟು ರ್ಯಾಲಿ ಮಾಡುವದು ನಮಗೆ ರೂಢಿಯಿಲ್ಲ ಎಂದು ವ್ಯಂಗ್ಯವಾಡಿದರು.
ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಸರಕಾರದ ವಾರ್ತಾ ಇಲಾಖೆ ಇದೆ. ಅದನ್ನು ಬಳಸಿಕೊಂಡು ಜನರಗೆ ಕಾಯ್ದೆಯ ಕುರಿತು ಜಾಗೃತಿ ಮೂಡಿಸಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಬಿಜೆಪಿ ಪಕ್ಷವು ಸರಕಾರದ ಕೆಲಸ ಮಾಡುತ್ತಿದೆ. ಜನರು ವಿರೋಧ ಮಾಡಿದರೆ ಇವರು ಪರವಾಗಿ ಕೆಲಸ ಮಾಡುತ್ತಾರೆ. ಒಟ್ಟಾರೆಯಾಗಿ ಜನರಿಗೆ ಉದ್ಯೋಗ ನೀಡದೆ ಹೋರಾಟಗಳ ಹೆಸರಲ್ಲಿ ಮತ್ತೆ ರಸ್ತೆಯ ಮೇಲೆ ನಿಲ್ಲಿಸುತ್ತಿದ್ದಾರೆ ಎಂದು ಕೀಡಿ ಕಾರಿದರು. ಬಿಜೆಪಿಯಲ್ಲಿ ಜನವಿರೋಧಿಯ ಅಲೆಯನ್ನು ಕಂಡು ನಡುಕ ಹುಟ್ಟಿಸಿದೆ. ಹೋರಾಟದ ಮೂಲಕ ರ್ಯಾಲಿ ನಡೆಸುತ್ತೇವೆ ಬಿಜೆಪಿ ನಾಯಕರಿಂದ ಸರ್ಟಿಫಿಕೇಟ್ ಕೇಳಿಲ್ಲ ಅದರ ಅವಶ್ಯಕತೆಯೂ ಇಲ್ಲ ಎಂದರು.
ರೈತರು ಖರೀದಿ ಮಾಡಿದ ತೊಗರಿ ಎಂ.ಎಸ್.ಪಿ ದರದಲ್ಲಿ ಖರೀದಿ ಮಾಡಲು ಸಾಧ್ಯಗವಾದೇ ಒಣ ಜಂಬ ಕೊಚ್ಚಿಕೊಳ್ಳುತ್ತಿರುವ ಬಿಜೆಪಿ ಪಕ್ಷ ವ್ಯಾಪಾರಿಗಳ ಪಕ್ಷವಾಗಿದೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡ ಡಾ. ಅಸಗರ ಚುಲಬುಲ್, ನಾಸೀರ ಹುಸೇನ ಉಸ್ತಾದ ಮೌಲಾ ಮುಲ್ಲಾ ಉಪಸ್ಥಿತರಿದ್ದರು.