ಸುರಪುರ: ನಗರದ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ಮಾಜಿ ಸಚಿವರಾದ ರಾಜಾ ಮದನಗೋಪಾಲ ನಾಯಕ್ ಅವರು ಅಧ್ಯಕ್ಷರಾ ಪುನರಾಯ್ಕೆಯಾಗಿದ್ದಾರೆ.
ರಾಜಾ ಮುಕುಂದನಾಯಕ ಉಪಾಧ್ಯಕ್ಷರು ,ಬಸವರಾಜ ಜಮದರಖಾನಿ ಕಾರ್ಯದರ್ಶಿ ,ರಾಘವೇಂದ್ರ ಬಾಡಿಯಾಳ ಸಹ ಕಾರ್ಯದಶಿ,ಗೋವರ್ಧನ್ ಜಂವಹರ ಖಜಾಂಚಿ ,ರಾಕೇಶ್ ಹಂಚಾಟೆ ಕ್ರೀಡಾ ಕಾರ್ಯದರ್ಶಿ ಹಾಗು ಆಡಳಿತ ಮಂಡಳಿ ಸದಸ್ಯರಾಗಿ ಅರವಿಂದ್ ಕುಮಾರ್ ಕೆ,ಬಸವಲಿಂಗಪ್ಪ ಪಾಟೀಲ,ಡಾಕ್ಟರ್ ಬಸವರಾಜ್ ಪಾಟೀಲ್ ,ಕಿಶೋರ್ ಚ೦ದ ಜೈನ್ ,ರಾಮನಗೌಡ ಸುಬೇದಾರ,ಶಫಿಕ್ ಅಹ್ಮದ್ ,ವೀರಪ್ಪ ಅವಂಟಿಯವರು ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿಗಳಾಗಿದ್ದ ಶಾಂತಪ್ಪ ಬೂದಿಹಾಳ ಮತ್ತು ಶ್ರೀನಿವಾಸ್ ಜಾಲವಾದಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.