ಕಲಬುರಗಿ: ಜಿಲ್ಲಾ ಪೊಲೀಸ್ ಆಯುಕ್ತ ಮತ್ತು ಡಿಇಜಿಪಿಯಾಗಿ ಇಂದು ನಗರದ ಡಿಇಜಿಪಿ ಕಚೇರಿಯಲ್ಲಿ ಇಂದು ಐಪಿಎಸ್ ಎನ್, ಸತೀಶ್ ಕುಮಾರ್ ಅಧಿಕಾರ ಸ್ವೀಕರಿಸಿದರು.
ಮುಂದಿನ ಆದೇಶದ ವರೆಗೆ ಓಓಡಿ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಲಿರುವ ಐಪಿಎಸ್ ಸತೀಶ್ ಕುಮಾರ, ಈ ಹಿಂದೆ ಆಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ಕೆಎಸ್ ಆರ್ ಪಿ, ಬೆಂಗಳೂರುನಲ್ಲಿ ಕಾರ್ಯ ನಿರ್ವಹಿಸಿದ್ದರು.
ಅಧಿಕಾರ ಸ್ವೀಕಾರದ ನಂತರ ಮೊದಲ ಬಾರಿಗೆ ಮಾಧ್ಯಮರೊಂದಿಗೆ ಮಾತನಾಡಿ, ದೇಶದಲ್ಲಿ ಕೊರೋನಾ ವೈರಸ್ ಸಂಕಷ್ಟ ಎದುರಾಗಿದೆ ಎಲ್ಲರು ಸೋಂಕು ತಡೆಗಟ್ಟುವಿಗೆ ಜಿಲ್ಲಾಡಳಿತ ನೀಡಿರುವ ನಿರ್ದೇಶನ ಪಾಲಿಸಬೇಕು. ಜಿಲ್ಲೆಯಲ್ಲಿ ಕಲವು ಕಡೆಗಳಲ್ಲಿ ಜನರು ಓಡಾಡುತ್ತಿರುವುದು ಗಮನಕ್ಕೆ ಬಂದಿದೆ.
ಅಲ್ಲದೇ ಅನಾವಶ್ಯಕ ಬೈಕ್ ಮೇಲೆ ಓಡಾಡುವರ ಬೈಕ್ ಜಪ್ತಿ ಮಾಡುವ ಕಾರ್ಯ ನಡೆಯುತ್ತಿದೆ. ಮೆಡಿಕಲ್ ಚೀಟಿ ತೋರಿಸಿ ಸುಳ್ಳು ಹೇಳಿ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿರುವ ಅಂಶ ಬೆಳಕಿಗೆ ಬರುತ್ತಿದೆ, ಇಂತಹ ಚೆಷ್ಟೆಗಳು ಮಾಡಬಾರದು.
ಅನಾವಶ್ಯಕ ಮನೆಯಿಂದ ಹೊರಗಡೆ ಬರಬಾರದು, ಅಗತ್ಯ ವಸ್ತುಗಳ ಖರೀದಿಗೆ ಮನೆಯಿಂದ ಹೊರಗಡೆ ಬಂದು ಮತ್ತೆ ಮನೆಯೊಳಗೆ ಸೇರಬೇಕೆಂದು ಮನವಿ ಮಾಡಿದ್ದಾರೆ.