ಛಾಯಾಗ್ರಾಹಕರಿಗೆ ಸರಕಾರದಿಂದ ನೆರವು ಘೋಷಣೆಗೆ ಸಂಘ ಆಗ್ರಹ

0
111

ಶಹಾಬಾದ: ಮದುವೆ ಸಮಾರಂಭ, ಗೃಹ ಪ್ರವೇಶ ಇತರ ಸಮಾರಂಭಗಳಲ್ಲಿ ಫೋಟೋ ತೆಗೆದು ನಮ್ಮ ಬದುಕನ್ನು ಕಟ್ಟಿಕೊಳ್ಳುವ ಛಾಯಾಗ್ರಾಹಕರಿಗೆ ಸರ್ಕಾರ ಒಂದಿಷ್ಟು ಸಹಾಯ ಹಸ್ತ ಚಾಚಬೇಕೆಂದು ನಗರದ ಛಾಯಾಗ್ರಹಕರ ಸಂಘದ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಶರಬು ಪಟ್ಟೇದಾರ ಮನವಿ ಮಾಡಿದ್ದಾರೆ.

ಬೇಸಿಗೆ ಕಾಲ ಬಂದರೆ ಸಮಾರಂಭಗಳ ಸುಗ್ಗಿ. ಮದುವೆ ಸಮಾರಂಭಗಳ ಆರ್ಡರಗಳ ಈ ಸಮಯದಲ್ಲೇ ಛಾಯಗ್ರಾಹಕರಿಗೆ ಒಂದಿಷ್ಟು ಹಣ ಗಳಿಸುವ ಸಮಯ. ಕರೊನಾ ವೈರಸ್‍ದಿಂದಾಗಿ ಅವಕಾಶ ಕೈ ಮೀರಿ ಹೋಗಿದೆ. ಬ್ಯಾಂಕಿನಿಂದ ಸಾಲ ಪಡೆದು ಕ್ಯಾಮರಾ, ವಿಡಿಯೋ ಕ್ಯಾಮರಾಗಳನ್ನು ತಂದಿದ್ದೆವೆ. ಆದರೆ ಕೆಲಸವಿಲ್ಲದೇ ಎಲ್ಲಿಲ್ಲದ ತೊಂದರೆ ಅನುಭವಿಸುವಂತಾಗಿದೆ. ಕರೋನಾ ರೋಗದಿಂದ ಛಾಯಗ್ರಾಹಕರ ಬದುಕು ಮೂರಾಬಟ್ಟೆಯಾಗಿದೆ.ಆದ್ದರಿಂದ ಸರ್ಕಾರ ನಮ್ಮ ಬದುಕಿಗೆ ಭದ್ರತೆ ಒದಗಿಸಲು ಒಂದಿಷ್ಟು ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here