ಎಸ್‍ಸಿಪಿ ಟಿಎಸ್‍ಪಿಗೆ ಹೆಚ್ಚಿನ ಹಣ ನೀಡಲು ಸಚಿವರಿಗೆ ವೆಂಕೋಬ ದೊರೆ ಮನವಿ

0
102

ಸುರಪುರ: ನಾರಾಯಾಣಪುರ ಬಸವಸಾಗರ ಜಲಾಶಯಕ್ಕೆ ಭೇಟಿ ಮಾಡಿದ ನೀರಾವರಿ ಮಂತ್ರಿ ರಮೇಶ ಜಾರಕಿಹೊಳೆಯವರನ್ನು ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಉತ್ತರ ಕರ್ನಾಟಕ ಭಾಗದ ಅಭಿವೃಧ್ಧಿಗೆ ನೀರಾವರಿ ತುಂಬಾ ಅವಶ್ಯಕವಾಗಿದ್ದು ಈ ಭಾಗದ ನೀರಾವರಿ ಕಾಮಗಾರಿಗಳಿಗೆ ಹೆಚ್ಚಿನ ಹಣ ನೀಡಲು ವಿನಂತಿಸಿದರು.ಅಲ್ಲದೆ ಎಸ್‍ಸಿಪಿ ಟಿಎಸ್‍ಪಿ ಕಾಮಗಾರಿಗೆ ಹೆಚ್ಚಿನ ಹಣ ಬಿಡುಗಡೆ ಮಾಡುವ ಮೂಲಕ ಪರಿಶಿಷ್ಟ ಜನರ ಅಭೀವೃಧ್ಧಿಗೆ ಹೆಚ್ಚು ಒತ್ತು ನೀಡುವಂತೆ ಮನವಿ ಮಾಡಿದರು.ತಾವುಕೂಡ ಪರಿಶಿಷ್ಟ ಸಮುದಾಯದ ಒಬ್ಬ ಪ್ರಮುಖ ನಾಯಕರಾಗಿದ್ದು ಈ ಸಮುದಾಯದ ಜನರ ಅಭೀವೃಧ್ಧಿಗೆ ನಿಮ್ಮ ಕೊಡುಗೆ ಮುಖ್ಯವಾಗಿದ್ದು ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ವಿನಂತಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸುರಪುರ ಶಾಸಕ ನರಸಿಂಹ ನಾಯಕ (ರಾಜುಗೌಡ),ದೇವದುರ್ಗ ಶಾಸಕ ಶಿವನಗೌಡ ನಾಯಕ, ರಾಯಚೂರು ಶಾಸಕ ಶಿವರಾಜ ಪಾಟೀಲ್,ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್,ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ,ಲಿಂಗಸೂರು ಮಾಜಿ ಶಾಸಕ ಮಾನಪ್ಪ ವಜ್ಜಲ್ ಹಾಗು ಮುಖಂಡ ಮಾನಪ್ಪ ನಾಯಕ,ಬಸನಗೌಡ ಅಳ್ಳಿಕೋಟಿ,ಗೋಪಾಲ ಬಾಗಲಕೋಟೆ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here