ಆಸರ ಮೊಹಲ್ಲಾಕೆ ಶಾಸಕ ರಾಜುಗೌಡ ಭೇಟಿ ನೀಡಿ ಜಾಗೃತಿ ಮೂಡಿಸಿದರು

0
33

ಸುರಪುರ: ಕೊರೊನಾ ಸೊಂಕು ತಗುಲಿರುವ ನಗರದ ಆಸರ ಮೊಹಲ್ಲಾಕೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಭೇಟಿ ನೀಡಿ ಜನರಲ್ಲಿನ ಆತಂಕ ದೂರಗೊಳಿಸುವ ಪ್ರಯತ್ನ ಮಾಡಿದರು.ಬೆಳಿಗ್ಗೆ ಆಸರ ಮೊಹಲ್ಲಾದ ಇಬ್ಬರಲ್ಲಿ ಕೊರೊನಾ ಸೊಂಕು ಇರುವ ಬಗ್ಗೆ ಶಂಕೆ ಎಲ್ಲೆಡೆ ಹರಡುತ್ತಿದ್ದಂತೆ ಜನರು ಭಯಭೀತರಾಗಿ ಆಸರ ಮೊಹಲ್ಲಾದ ಕಡೆಗೆ ಯಾರೂ ಹೋಗದಂತೆ ಹಾಗು ಅಲ್ಲಿಯ ಜನರು ಬಾರಂತೆ ದಿಗ್ಬಂಧನ ಹರಡಿದ್ದರು.

ಮದ್ಹ್ಯಾನದ ಸುಮಾರಿಗೆ ಶಾಸಕ ರಾಜುಗೌಡ ಆಸರ ಮೊಹಲ್ಲಾಕೆ ಭೇಟಿ ನೀಡಿ ಜನರಿಗೆ ಭೇಟಿ ಮಾಡಿ,ತಾವ್ಯಾರು ಆತಂಕಗೊಳ್ಳುವ ಅವಶ್ಯವಿಲ್ಲ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ಹಸ್ತ ನೀಡಿದರು. ಕೊರೊನಾ ಸೊಂಕು ಇರುವವರನ್ನು ಈಗಾಗಲೆ ಆರೋಗ್ಯ ಇಲಾಖೆಯವರು ಇಲ್ಲಿಗೆ ಬರದಂತೆ ನೋಡಿಕೊಂಡಿದ್ದಾರೆ.ಇದರಿಂದ ಯಾರಿಗೂ ತೊಂದರೆಯಾಗದು.ಆದರೆ ತಾವುಗಳು ಮಾಸ್ಕ್ ಇಲ್ಲದೆ ಹೊರಗೆ ಬರಬೇಡಿ,ಸದಾಕಾಲ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ,ಅನಾವಶ್ಯಕವಾಗಿ ಹೊರಗೆ ಬರುವುದನ್ನು ಬಿಡಿ,ಮನೆಯಲ್ಲಿದ್ದು ಆಗಾಗ ಕೈಗಳನ್ನು ತೊಳೆಯುತ್ತಿರುವಂತೆ ತಿಳಿಸಿದರು.

Contact Your\'s Advertisement; 9902492681

ನಿಮಗೆ ಏನಾದರು ತೊಂದರೆಯಾದರೆ ತಿಳಿಸಿ ಹಾಗು ಈಗಾಗಲೆ ಆಸರ ಮೊಹಲ್ಲಾ ಸೀಲ್‍ಡೌನ್ ಎಂದು ಜಿಲ್ಲಾಧಿಕಾರಿಗಳು ಘೋಷಿಸಿದ್ದರಿಂದ ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು. ಸೊಂಕಿತರ ಮನೆಯಿಂದ ನೂರು ಮೀಟರ್ ವರೆಗೆ ಸೀಲ್‍ಡೌನ್ ಇರಲಿದೆ ಇದಕ್ಕೆ ಜನರು ಸಹಕರಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ ನಿಂಗಣ್ಣ ಬಿರಾದಾರ್,ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ,ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ,ಆರಕ್ಷಕ ನಿರೀಕ್ಷಕ ಎಸ್.ಎಂ.ಪಾಟೀಲ್,ನಗರಸಭೆ ಪೌರಾಯುಕ್ತ ಜೀವನ್ ಕಟ್ಟಿಮನಿ ಸೇರಿದಂತೆ ಅನೇಕ ಜನ ಅಧಿಕಾರಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here