ಕಲಬುರಗಿ: ಸುಮಾರು ೨೫ ಲಕ್ಷ ಜನಸಂಖ್ಯೆ ಹೊಂದಿದ ಜಿಲ್ಲೆಗೆ ಕೊರೊನಾ ಪರೀಕ್ಷೆಗೆ ಅನೇಕ ಯಂತ್ರಗಳ ಅವಶ್ಯಕತೆಯಿದೆ, ಇದನ್ನು ಮನಗಂಡು ಹೈ.ಕ.ಶಿ. ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಸಿ. ಬಿಲಗುಂದಿ ನೆತ್ರುತ್ವದಲ್ಲಿ ಮತ್ತು ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಕೂಡಿ, ಕೋವಿಡ-೧೯ ನಂತಹ ಮಹಾಮಾರಿ ಮತ್ತು ಕ್ಷಯ (ಖಿಃ) ಎಚ್,ಆಯಿ.ವ್ಹಿ, ಹೆಪೆಟೆಟಿಸ್-ಬಿ ಮತ್ತು ಹೆಪೆಟೆಟಿಸ್-ಸಿ ಅಂತಹ ಮಾರಕ ಸಂಕ್ರಾಮಿಕ ರೋಗಗಳನ್ನು ನಿರ್ಣಯಿಸುವ ಮತ್ತುದೃಡಿಕರಿಸುವ ಒಂದೆಒಂದು ಪರೀಕ್ಷೆ, ಅದೆನೆಂದರೆ ಖಖಿ-Pಅಖ. ಇಂತಹ ಪರೀಕ್ಷೆಯ ಉಪಕರಣ ಹೊಂದಿದ, ಅತ್ಯುನ್ನತ ತಾಂತ್ರಿಕ ಮಟ್ಟದ ಕೋವಿಡ-೧೯ ಪರೀಕ್ಷಾ ಕೇಂದ್ರವನ್ನು ಹೈ.ಕ.ಶಿ. ಸಂಸ್ಥೆಯ ಬಸವೆಶ್ವರ ಬೊಧನಾ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ಇದೇ 5 ರಂದು ಬೆಳಿಗ್ಗೆ ೧೧.೩೦ ಕ್ಕೆ ಉದ್ಘಾಟನಾ ಸಮಾರಂಭವನ್ನು ಹಮ್ಮಿಕ್ಕೊಳ್ಳಲಾಗಿದೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಷ.ಬ್ರ.ಡಾ.ಚನ್ನವೀರ ಶಿವಾಚಾರ್ಯರು ಸುಕ್ಷೇತ್ರ ಹಾರಕೂಡ,ಹಿರೇಮಠ ಸಂಸ್ಥಾನ, ಹಾರಕೂಡ ವಹಿಸುವರು, ಶ್ರೀ ದತ್ತಾತ್ರೇಯ ಸಿ.ಪಾಟೀಲ,ರೇವೂರ ಮಾನ್ಯ ಶಾಸಕರು,ದಕ್ಷಿಣ ಮತಕ್ಷೇತ್ರ, ಕಲಬುರಗಿ ಮತ್ತು ಅಧ್ಯಕ್ಷರು, ಕಲ್ಯಾಣಕರ್ನಾಟಕ ವಿಭಾಗ ಅಭಿವೃದ್ಧಿ ಮಂಡಳಿ, ಕಲಬುರಗಿ, ಕೋವಿಡ-೧೯ ಪರೀಕ್ಷಾ ಕೇಂದ್ರವನ್ನು ಉದ್ಘಾಟಿಸುವರು. ಶ್ರೀ ಬಿ.ಜಿ.ಪಾಟೀಲ ಮಾನ್ಯ ವಿಧಾನ ಪರಿಷತ್ ಸದಸ್ಯರು, ಕಲಬುರಗಿ, ಮುಖ್ಯ ಅತಿಥಿಗಳಾಗಿ ಆಗಮಿಸವರು. ಡಾ.ಭೀಮಾಶಂಕರ ಸಿ.ಬಿಲಗುಂದಿ, ಅಧ್ಯಕ್ಷರು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ, ಕಲಬುರಗಿ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು.
ಅಮೇರಿಕಾದ ಥರ್ಮೊಫಿಶರ್ ಸೈಂಟಿಫಿಕ್ ಎಂಬ ಕಂಪನಿಯ ಯಂತ್ರವನ್ನು, Iಅಒಖ ನಿಂದ ಅನುಮತಿ ಪಡೆದಿದ್ದು ಕೋವಿಡ-೧೯ ಪರೀಕ್ಷಾ ಕೇಂದ್ರವನ್ನು ಉದ್ಘಾಟಿಸಲಾಗುತ್ತಿದೆ ಎಂದು ಅಧ್ಯಕ್ಷರಾದ ಡಾ. ಭೀಮಾಶಂಕರ.ಸಿ. ಬಿಲಗುಂದಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಉಪಾಧ್ಯಕ್ಷರಾದ ಡಾ. ಶಿವಾನಂದ ದೇವರಮನಿ, ಕಾರ್ಯದರ್ಶಿಗಳಾದ. ನೀತಿನ.ಬಿ. ಜವಳಿ, ಜಂಟಿ-ಕಾರ್ಯದರ್ಶಿಗಳಾದ ಗಂಗಾಧರ ಎಲಿ, ಆಡಳಿತ ಮಂಡಳಿಯ ಸದಸ್ಯರಾದ ವಿಜಯಕುಮಾರ ದೇಶಮುಖ ಡಾ.ಸಂಪತ್ಕುಮಾರ ಲೊಯಾ, ಡಾ. ಬಸವರಾಜ ಜಿ. ಪಾಟಿಲ್, ಡಾ.ನಾಗೇಂದ್ರ ಮಂಠಾಳೆ, ಅನುರಾಧಾ ದೆಸಾಯಿಉದಯಕುಮಾರ ಚಿಂಚೋಳಿ, ಅರುಣ ಪಾಟಿಲ್, ಅನೀಲ ಮರಗೋಳ, ಡಾ. ಎಸ್. ಕಾಮರೆಡ್ಡಿ, ಸತೀಶ್ಚಂದ್ರ ಹಡಗಲಿಮಠ್, ಡಾ.ಶಿವಪುತ್ರಪ್ಪಾ ಹರವಾಳ,. ಸಂಜಯ ಮಾಕಾಲ್ ಮತ್ತು ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ಬಿ. ಎ. ರುದ್ರವಾಡಿ ಉಪಸ್ಥಿತರಿದ್ದರು.