ಕಲಬುರಗಿ: ಕರವೇ ಕೇಂದ್ರ ಕಚೇರಿಯಲ್ಲಿ ಗಾಂಧಿ ಜಯಂತಿ ಆಚರಣೆ

0
33

ಕಲಬುರಗಿ: ಜೈ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕೇಂದ್ರ ಕಛೇರಿಯಲ್ಲಿ ಮಹತ್ಮಾಗಾಂಧಿಜಿ ಅವರ  ಜಯಂತ್ಯೋತ್ಸವವನ್ನು ಸಂಸ್ಥಾಪಕ ಗೌರವ ಅಧ್ಯಕ್ಷರಾದ ಅರುಣಕುಮಾರ ಪಾಟೀಲ ಅವರ ಮಾರ್ಗದರ್ಶನದಲ್ಲಿ ರಾಜ್ಯ ಅಧ್ಯಕ್ಷ ಮಂಜುನಾಥ ಬಿ. ಹಾಗರಗಿಯವರ ನೆತೃತ್ವದಲ್ಲಿ  ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೆಶಿಸಿ ಮಾತನಾಡಿದ ಅವರು ಮಹತ್ಮಾ ಗಾಂಧಿಜಿ ಅವರು ಸತ್ಯ ಮತ್ತು ಅಹಿಂಸಾ ಇಂದಲೆ ನಮ್ಮ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟರು ಆದರೆ ನಮ್ಮ ರಾಜ್ಯಕಾರಣಿಗಳು ಸುಳ್ಳು ಮತ್ತು ಹಿಂಸೆಯಿಂದ ಅಧಿಕಾರಕ್ಕೆ ಬಂದು ಜನರನ್ನು ದೊಚಿ ದೇಶವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಜನರು ಜಾಗೃತರಾಗಬೇಕೆಂದು ಕರೆ ನೀಡಿದರು.

Contact Your\'s Advertisement; 9902492681

ರಾಜ್ಯ ಪ್ರಧಾನ ಕಾರ್ಯದರ್ಶಿ ಜಗನಾಥ ಪಟ್ಟಣಶೆಟ್ಟಿ, ಮೈಮುದ ಯಲಗಾರ, ವಿರೇಶ, ಕಪಿಲ ನಾಯಕ, ಪ್ರವೀಣ ಚೌಹಾಣ ಶರಣು ಖಾನಾಪೂರೆ ಶಂತು ವಾಡೆದ ಮುಂತಾದವರು ಜೈ ಕರ್ನಾಟಕ ರಕ್ಷಣಾ ವೇದಿಕೆ ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here