ಕಲಬುರಗಿ; ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯ ಪ್ರಚಾರ ಸಮಿತಿಗೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದ ಕಾರ್ಯದರ್ಶಿಯನ್ನಾಗಿ ಕಿರಣ ರಾಜಶೇಖರ ಪಾಟೀಲ್(ಅಪ್ಪಾಜಿ) ಅವರಿಗೆ ನೇಮಕದ ಆದೇಶ ಪತ್ರವನ್ನು ಮಾಜಿ ಶಾಸಕ ಹಾಗೂ ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ರಾಜ್ಯ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವೈ.ಎಸ್.ವಿ ದತ್ತ ಅವರು ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜಶೇಖರ ಪಾಟೀಲ್ (ಅಪ್ಪಾಜಿ), ಮಹಾದೇವಪ್ಪ ಜಮಾದಾರ, ಸಿದ್ರಾಮಪ್ಪ ಜೇವರ್ಗಿ, ಚೇತನ ಬಿರಾದಾರ, ಅಶೋಕ ಮಾದಗೂಂಡ, ಪ್ರಶಾಂತ ಜೇವರ್ಗಿ, ಪ್ರಶಾಂತ ಮಚ್ಚಟ್ಟಿ, ಭೂದರಾಜ, ಯೂಸುಫ್, ವೆಂಕಟೇಶ, ಅವಿನಾಶ, ಶರಣ ಪಾಟೀಲ್, ಸಚ್ಚಿನ್, ಅಖಿಲೇಶ ಹಾಗೂ ನೂರಾರು ಯುವಕರ ಇದ್ದರು.
ಕಲಬುರಗಿ: ನಗರಕ್ಕೆ ಆಗಮಿಸಿದ ಮಾಜಿ ಶಾಸಕ ಹಾಗೂ ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ರಾಜ್ಯ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವೈ.ಎಸ್.ವಿ ದತ್ತ ಅವರನ್ನು ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ್, ಎಸ್ಸಿಎಸ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಡಿ.ಮೋರೆ, ದಕ್ಷಿಣ ಮತಕ್ಷೇತ್ರದ ಅಧ್ಯಕ್ಷ ಮಹಾತಪ್ಪಾ ಮದ್ರಿ, ಹಿಂದುಳಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲಕುಮಾರ ಹಾಗೂ ಶಿವಕುಮಾರ ಗುತ್ತೇದಾರ ಸನ್ಮಾನಿಸಿದರು.