ವಿಷ್ಣುವರ್ಧನರ ಪುತ್ಥಳಿ ಧ್ವಂಸಗೊಳಿಸದವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ-ಮಲ್ಲು ವಿಷ್ಣುಸೇನಾ

0
23

ಸುರಪುರ: ನಮ್ಮ ಅಪ್ಪಾಜಿ ನಟ ದಿ: ಡಾ: ವಿಷ್ಣುವರ್ಧನ ಅವರು ಬದುಕಿದ್ದಾಗಲು ಅವರಿಗೆ ತುಂಬಾ ತೊಂದರೆ ನೀಡಿದರು,ಈಗ ಅವರು ನಿಧನದ ನಂತರವು ದುಷ್ಟರು ಅವರ ಪುತ್ಥಳಿಯನ್ನು ಧ್ವಂಸಗೊಳಿಸಿರುವುದು ವಿಷ್ಣುವರ್ಧನ ಅವರ ಕೋಟ್ಯಾಂತರರ ಅಭಿಮಾನಿಗಳಿಗೆ ತೀವ್ರ ಬೇಸರವನ್ನುಂಟು ಮಾಡಿದೆ,ಬೆಂಗಳೂರಿನ ಕೊಲ್ಗೇಟ್‌ಲ್ಲಿ ನಡೆದ ಘಟನೆಯನ್ನು ಉಗ್ರವಾಗಿ ಖಂಡಿಸುವುದಾಗಿ ತಾಲೂಕು ವಿಷ್ಣುಸೇನಾ ಸಮಿತಿ ಅಧ್ಯಕ್ಷ ಮಲ್ಲು ವಿಷ್ಣುಸೇನಾ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಲ್ಲಿ ನಟ ವಿಷ್ಣುವರ್ಧನ ಅವರ ಪುತ್ಥಳಿ ಧ್ವಂಸಗೊಳಿಸಿದ್ದನ್ನು ಖಂಡಿಸಿ ನಗರದ ತಿಮ್ಮಾಪುರದಲ್ಲಿ ವಿಷ್ಣು ಸೇನಾ ಸಂಘಟನೆಯಿಂದ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿ,ಡಾ: ವಿಷ್ಣುವರ್ಧನ್ ಅವರು ಬದುಕಿನುದ್ದಕ್ಕೂ ಕನ್ನಡ ನಾಡು ನುಡಿ ನೆಲ ಜನಕ್ಕಾಗಿ ಹೋರಾಟ ನಡೆಸಿದವರು,ಅವರು ಬದುಕಿರುವಾಗಲು ಕೆಲವು ದುಷ್ಟರು ಅವರಿಗೆ ನೋವು ನೀಡಿದರು.

Contact Your\'s Advertisement; 9902492681

ಈಗ ಅವರ ಪುತ್ಥಳಿ ಧ್ವಂಸಗೊಳಿಸುವ ಮೂಲಕ ತಮ್ಮ ವಿಕೃತಿ ಮೆರೆದಿದ್ದಾರೆ ಇದನ್ನು ವಿಷ್ಣುಸೇನಾ ಸಮಿತಿ ಖಂಡಿಸುತ್ತದೆ,ಅಲ್ಲದೆ ಪುತ್ಥಳಿ ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ಸರಕಾರ ಕೂಡಲೆ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು ಮತ್ತು ಪುತ್ಥಳಿ ಧ್ವಂಸಗೊಳಿಸಿದ ಸ್ಥಳದಲ್ಲಿ ಪುನಃ ಮೂರ್ತಿ ನಿರ್ಮಿಸಬೇಕೆಂದು ಆಗ್ರಹಿಸಿದರು.

ಇಲ್ಲವಾದಲ್ಲಿ ನಮ್ಮ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ ಅವರ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು ಈ ಸಂದರ್ಭದಲ್ಲಿ ಅನೇಕ ಜನ ವಿಷ್ಣುವರ್ಧನ ಅವರ ಅಭಿಮಾನಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here