ಕಲಬುರಗಿ: ಬೀದರ ಪಶು ವಿಶ್ವವಿದ್ಯಾಲಯ ದಕ್ಷಿಣ ಕನ್ನಡ ಜಿಲ್ಲೆಗೆ ಸ್ಥಳಾಂತರ ಮಾಡಲು ಕುತಂತ್ರ ನಡೆಸಿರುವುದು ಖಂಡನೀಯವಾಗಿದೆ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅಧಿಕೃತವಾಗಿ ದಶಕಗಳಿಂದ ಇದ್ದ ಆರೋಗ್ಯ ಪರೀಕ್ಷಾ ಪ್ರಯೋಗಾಲಯ ಮತ್ತು ನವಿಕರಿಸಬಹುದಾದ ಕರ್ನಾಟಕ ಇಂಧನ ಪ್ರಾದೇಶಿಕ ಕಚೇರಿ ಹಾಗೂ ಸಿ.ವಿ.ಕೆ.ಯ ಎಕ್ಸಲೆನ್ಸಿ ಸೆಂಟರ (ಸಂಶೋಧನಾ ಕೇಂದ್ರ) ಅದರಂತೆ ನಮ್ಮ ಹಕ್ಕಿನ ಏಮ್ಸ್ ಬೇರೆಡೆಗೆ ಸ್ಥಳಾಂತರ ಮಾಡಿರುವದು ಕೆಲವೊಂದು ಸಂಸ್ಥೆಗಳು ಬೇರೆಡೆಗೆ ಸ್ಥಳಾಂತರ ಮಾಡಲು ಸಂಚು ನಡೆಸುತ್ತಿದ್ದಾರೆಂದು ತಿಳಿಸಿದ್ದಾರೆ.
ಸರಕಾರ ಈಗಾಗಲೇ ಭಾಗದ ಹಕ್ಕಿನ ಸಂಸ್ಥೆಗಳ ಸ್ಥಳಾಂತರದ ಬಗ್ಗೆ ಪಕ್ಷಾತೀತವಾಗಿ ಎಲ್ಲರೂ ಖಂಡಿಸಿದ್ದೇವೆ. ಸರಕಾರದ ಈ ವರ್ತನೆ ನಿಲ್ಲದಿದ್ದರೆ ಭವಿಷ್ಯದಲ್ಲಿ ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ಒತ್ತಡ ತರಲು ಕಾಲಮಿತಿಯಲ್ಲಿ ನಿಯೋಗ ಕರೆದುಕೊಂಡು ಹೋಗಬೇಕೆಂದು ಒತ್ತಾಯಿಸಿದ್ದಾರೆ.