ಕಲಬುರಗಿ: ನೂತನವಾಗಿ ಕಾಡಾ ಅಧ್ಯಕ್ಷರಾಗಿ ಆಯ್ಕೆಯಾದ ಹರ್ಷವರ್ಧನ್ ಗೂಗಲೇ ಮತ್ತು ಡಾ.ಅಂಬೇಡ್ಕರ ಫಿಲೋಷಿಪ್ ಪ್ರಶಸ್ತಿ ಪುರಸ್ಕೃತ ಡಾ.ಎ.ಎಸ್.ಭದ್ರಶೆಟ್ಟಿ ಅವರನ್ನು ಸ್ನೇಹ ಜೀವಿ ಬಳಗ ಹಾಗೂ ಗೆಳೆಯರ ಬಳಗ ಜಯನಗರ ಕಲಬುರಗಿ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಎ.ಎಸ್.ಭದ್ರಶೆಟ್ಟಿ ಪ್ರಶಸ್ತಿಯಿಂದ ಜವಾಬ್ದಾರಿ ಇನ್ನು ಹೆಚ್ಚಿಸಿದೆ.ಸಮಾಜ ಸೇವೆಯೇ ಮುಖ್ಯಧೇಯ ಆಗಿದೆ ಎಂದರು.
ಈ ಸಂದರ್ಭದಲ್ಲಿ ಡಾ.ಶಿವಕುಮಾರ ಚೇಂಗಟಾ, ಶಿವರುದ್ರಪ್ಪ ತಡಕಲ,ಅಣ್ಣಾರಾವ ಹೆಬ್ಬಾಳ,ಶಂಕರ ತಡಕಲ, ಶರಣಬಸಪ್ಪ ಹಾವಪಗೋಳ, ಶರಣಪ್ಪ ಹತ್ತಿ ಜಿಸಿಕಂಠ ತಡಕಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.