ಕಲಬುರಗಿ: ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯದ ಜಾನಪದ ಮತ್ತು ಬುಡಕಟ್ಟು ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜಶೇಖರನ್. ಎಲ್ ಅವರ ಸಂಶೋಧನಾ ಪತ್ರಿಕೆಯು ‘ಅತ್ಯುತ್ತಮ ಸಂಶೋದನಾ ಪತ್ರಿಕೆ ಪ್ರಶಸ್ತಿ’ಗೆ ಭಾಜನವಾಗಿದೆ.
ತಮಿಳುನಾಡಿನ ಸಯ್ಯದ್ ಅಮ್ಮಲ್ ಆಟ್ರ್ಸ್ & ಸೈನ್ಸ್ ಕಾಲೇಜಿನ ಇಂಗ್ಲೀಷ್ ವಿಭಾಗವು ಹಮ್ಮಿಕೊಂಡ ‘ಸಮಕಾಲೀನ ವಿಮರ್ಶಾತ್ಮಕ ಸಿದ್ಧಾಂತದ ಜಾಗತಿಕ ದೃಷ್ಟಿಕೋನ’ ಎಂಬ ವಿಷಯದ ಕುರಿತ ಒಂದು ದಿನದ ರಾಷ್ಟ್ರೀಯ ಸೆಮಿನಾರ್ನಲ್ಲಿ ಅವರು ‘ಮಿಥ್ ಕ್ರಿಟಿಸಿಸಂ’ ಎಂಬ ಪ್ರಬಂಧವನ್ನು ಪ್ರಸ್ತುತಪಡಿಸಿದರು.