ಕಲಬುರಗಿ: ನಗರದ ಡಿಎಂಎಸ್ಎಸ್ ಜಿಲ್ಲಾ ಕಚೇರಿಯಲ್ಲಿ ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೦ನೇ ಜನ್ಮದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಲಿಂಗರಾಜ್ ತಾರಫೈಲ್, ಮುಖಂಡರಾದ ಬಸವರಾಜ ಜವಳಿ, ಶಿವಕುಮಾರ್ ದೊಡ್ಡಮನಿ, ದಿಗಂಬರ್ ತ್ರಿಮೂರ್ತಿ, ಸಂತೋಷ್ ಗಟ್ಟು, ಶಾಂತಕುಮಾರ್, ಮಾದೇಶ ಮುಂತಾದವರು ಇದ್ದರು.