ಕಲಬುರಗಿ: ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹಾಗೂ ವರ್ಕ್ ಕಮಿಟಿ ಅಧ್ಯಕ್ಷ ಖಾಜಾ ಮೈನೋದ್ದಿನ್ ಪಟೇಲ್, ತಾಪಂ ಸದಸ್ಯ ಪ್ರವೀಣ ನಾಗೂರೆ ನಿಧನರಾದ್ದರಿಂದ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮಾಜಿ ಎಂಎಲ್ಸಿ ಅಲ್ಲಮಪ್ರಭು ಪಾಟೀಲ, ಚಂದ್ರಿಕಾ ಪರಮೇಶ್ವರ, ಯೂನೂಸ್ ಅಲಿ, ಶೇಖ ಹುಸೇನಿ, ಶರಣಪ್ಪ ಅಂದಾನಿ, ನಾಗೇಂದ್ರ ಕೊರೆ, ಪರಶೂರಾಮ ನಾಟೀಕಾರ, ಮಲ್ಲಿಕಾರ್ಜುನ ನೀಲೂರ, ಪ್ರಕಾಶ ಕುರನಳ್ಳಿ, ಅಸ್ಲಾಂ ಸಿಂದಗಿ, ತುಳಜಪ್ಪ ಬಿರಾದಾರ, ಮೋದಿನ ಪಾಟೇಲ್, ಶ್ರೀಕಾಂತ ಮಾಳಗಿ ಇದ್ದರು.