ಕಲಬುರಗಿ: ಟ್ಯಾಕ್ಸಿ, ಆಟೋ ಚಾಲಕರಿಗೆ ಮತ್ತು ಬಡ ಕೂಲಿ ಕಾರ್ಮಿಕರ ಖಾತೆಗೆ 20,000 ರೂ. ಗಳ ಕೋವಿಡ್ ಲಾಕ್ ಡೌನ್ ಪರಿಹಾರ ಸಹಾಯಧನ ಜಮಾ ಮಾಡಲು ಆಗ್ರಹಿಸಿ ಜೈ ಕನ್ನಡಿಗರ ಸೇನೆ ಸಂಸ್ಥಾಪಕ ಅಧ್ಯಕ್ಷ ದತ್ತು ಭಾಸಗಿ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಶೇಷಗಿರಿ ಮರತೂರಕರ, ಸುನೀಲ್ ಪಾಣೆಗಾಂವ, ಸಂಜು ಮಾಳಗೆ, ಸಾಗರ ಕುಮಸಿ, ಪ್ರಶಾಂತ್ ಗುಲ್ಲಬಾಡಿ ಸೇರಿದಂತೆ ಹಲವರಿದ್ದರು.