ಶಹಾಬಾದ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನೆಯಡಿಯಲ್ಲಿ ನಿರ್ಗತಿಕರಿಗೆ ಮಾಶಾಸನ ವಿತರಿಸುವ ಕಾರ್ಯ ನಡೆಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರಾದ ಶಿವರಾಯಪ್ರಭು ಅವರು ಮಾತನಾಡಿ ಶ್ರಿಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಅಡಿಯಲ್ಲಿ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗಡೆಯವರ ಮಾರ್ಗದರ್ಶನದಿಂದ ಸಮಾಜದ ಬಡವರಿಗೆ, ಅಶಕ್ತರಿಗೆ, ವೃದ್ಧರಿಗೆ,ವಿಧವೆಯರಿಗೆ,ಅನಾಥರಿಗಾಗಿ ಅರ್ಥಿಕ ಸಮಾಯ ಮಾಡುತ್ತಿದೆ.
ಪ್ರಸಕ್ತ ಕೋವಿಡ್ ನಂತಹ ಪರಿಸ್ಥಿತಿಯಲ್ಲಿ ಜೀವನ ನಿರ್ವಹಣೆಗಾಗಿ ನಿರ್ಗತಿಕರಿಗೆ ಮಾಶಾಸನವನ್ನು ನೀಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಾಶಾಸನವು ಸಂಜೀವಿನಿಯಾಗಿದೆ.ನಮ್ಮ ಯೋಜನೆಯ ಸೇವಾ ಕಾರ್ಯಕರ್ತರು ಗುರುತಿಸಿದ ನಿರ್ಗತಿಕರಿಗೆ ಮಾಶಾಸನ ನೀಡಲಾಗುತ್ತಿದೆ ಎಂದು ಹೇಳಿದರು.
ಶಹಾಬಾದ,ಹಳೆಶಹಾಬಾದ ಹಾಗೂ ವಾಡಿ ಪಟ್ಟಣದ 47 ನಿರ್ಗತಿಕರ ಮನೆಮನೆಗೆ ಹೋಗಿ ತಲಾ 750 ರೂ ಮಾಶಾಸನ ಕೊಡಲಾಯಿತು.
ಈ ಸಂದರ್ಭದಲ್ಲಿ ಚಿತ್ತಾಪೂರ ತಾಲ್ಲೂಕ ಯೋಜನಾಧಿಕಾರಿಗಳಾದ ಕೃಷ್ಣಮೂರ್ತಿ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಕುಮಾರಿ ರೇಖಾ, ಸಂತೊಷ ಸೇರಿದಂತೆ ಹಲವರು ಉಪಸ್ಥಿತರಿದ್ದರು.