ಸುರಪುರ: ತಾಲೂಕಿನ ಕಚಕನೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಚಿಮಟ್ಟಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಬಸಿಗಾಲುವೆ ಸ್ವಚ್ಛತೆ ಕೆಲಸವನ್ನು ಆರಂಭಿಸಲಾಗಿದೆ.
ಕಳೆದ ಮೂರು ತಿಂಗಳಿನಿಂದ ಕೆಲಸವಿಲ್ಲದೆ ಗ್ರಾಮದ ೧೫೦ಕ್ಕು ಹೆಚ್ಚು ಜನ ಕೂಲಿಕಾರರು ಕೆಲಸವಿಲ್ಲದೆ ಕಂಗಾಲಾಗಿದ್ದರು.ಇದನ್ನು ಅರಿತುಕೊಂಡ ಕಚಕನೂರು ಗ್ರಾಮ ಪಂಚಾಯತಿ ಅಭೀವೃಧ್ಧಿ ಅಧಿಕಾರಿ ರವಿಚಂದ್ರ ರಡ್ಡಿಯವರ ಕಾಳಜಿಯಿಂದ ಬಾಚಿಮಟ್ಟಿ ಗ್ರಾಮದ ಕೂಲಿಕಾರರು ಕೆಲಸ ದೊರೆತಿದ್ದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.ಅಲ್ಲದೆ ಪಿಡಿಒ ರವಿಚಂದ್ರರಡ್ಡಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.