ಸುರಪುರ: ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುರಪುರ ಮತಕೇತ್ರದ ಬಿಜೆಪಿ ಮಂಡಲ ಯುವ ಮೋರ್ಚಾದ ಕಾರ್ಯಾಕಾರಿಣಿ ಸಭೆಯನ್ನು ನಡೆಸಲಾಯಿತು.ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಹಾಗು ಯುವ ಮೋರ್ಚಾ ಜಿಲ್ಲಾ ಉಸ್ತುವಾರಿ ಅಂಬ್ರೇಶ ರೈತನಗರ ಮಾತನಾಡಿ,ಇಡೀ ಕ್ಷೇತ್ರದಾದ್ಯಂತ ಪಕ್ಷ ಸಂಘಟನೆಗೆ ಯುವ ಮೋರ್ಚಾ ಮುಂದಾಗಬೇಕು ಹಾಗು ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಪಕ್ಷದ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಅಭ್ಯಾರ್ಥಿಗಳು ಗೆಲ್ಲುವ ನಿಟ್ಟಿನಲ್ಲಿ ಪಕ್ಷ ಬೂತ್ ಮಟ್ಟದಿಂದ ಸಂಘಟನೆ ನಡೆಸುವಂತೆ ಕರೆ ನೀಡಿದರು.
ನಂತರ ಸುರಪುರ ಮಂಡಲ ಅಧ್ಯಕ್ಷ ಶ್ರವಣ ನಾಯಕ ಮಾತನಾಡಿ,ಈಗಾಗಲೇ ಕ್ಷೇತ್ರದಾದ್ಯಂತ ಯುವ ಮೋರ್ಚಾದಿಂದ ನಿರಂತರ ಪಕ್ಷ ಸಂಘಟನೆ ಚಟುವಟಿಕೆಗಳು ನಡೆಯುತ್ತಿವೆ.ಅಲ್ಲದೆ ಡಾ:ಶ್ಯಾಮಪ್ರಸಾದ ಮುಖರ್ಜಿ ಅವರ ಜಯಂತಿ ಅಂಗವಾಗಿ ಸಸಿ ನೆಡಲು ಕರೆ ನೀಡಿದ್ದ ಕಾರ್ಯಕ್ರಮವನ್ನು ನಮ್ಮ ನಾಯಕರಾದ ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದಾದ್ಯಂತ ಎರಡು ಸಾವಿರಕ್ಕಿಂತಲೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಪಕ್ಷ ಸಂಘಟನೆಯ ಜೊತೆಗೆ ಜನರಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮೌನೇಶ ಬೆಳಗೆರಾ ಸೇರಿದಂತೆ ಅನೇಕರು ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ವಿನೋದ ದೊರೆ,ಜಿಲ್ಲಾ ಕಾರ್ಯದರ್ಶಿಗಳಾದ ಸಾಯಿಬಣ್ಣ ಮುಡಬೂಳ,ಮಂಜುನಾಥ ಗುತ್ತೇದಾರ,ತಾಲೂಕು ಪ್ರಧಾನ ಕಾರ್ಯದರ್ಶಿ ಕೃಷ್ಣಾ ಮಂಗಿಹಾಳ,ಮಲ್ಲಿಕಾರ್ಜುನ ಚಾನಕೋಟಿ ಕನ್ನೆಳ್ಳಿ ಮಲ್ಲು ಹೂಗಾರ್ ಬಸ್ಸು ಕೋನಾಳ ಪ್ರಭು ಕಕ್ಕೇರಾ ಸೇರಿದಂತೆ ಸುರಪುರ ಮಂಡಲದ ಎಲ್ಲಾ ಮುಖಂಡರು ಹಾಗು ಕಾರ್ಯಕರ್ತರು ಭಾಗವಹಿಸಿದ್ದರು.