ಸುರಪುರ: ನಗರದ ತಹಸೀಲ್ ರಸ್ತೆಯಲ್ಲಿರುವ ಹಳೆ ಕೋರ್ಟ್ ಬಳಿಯ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ.ಯಾರೋ ಕಿಡಗೇಡಿಗಳು ಶುಕ್ರವಾರ ರಾತ್ರಿ ದೇವಸ್ಥಾನದ ಬೀಗ ಮುರಿದು ಒಳಗಡೆ ಇರುವ ಹುಂಡಿಯನ್ನು ಕದ್ದಿದ್ದಾರೆ. ಅಲ್ಲದೆ ದೇವಸ್ಥಾನದ ಒಳಗಡೆ ಇದ್ದ ಕಂಚಿನ ವಿವಿಧ ವಸ್ತುಗಳನ್ನು ಕದ್ದಿದ್ದಾರೆ ಎಂದು ಹೇಳಲಾಗುತ್ತದೆ.
ಶನಿವಾರ ಬೆಳಿಗ್ಗೆ ವಾಹುವಿಹಾರಕ್ಕೆ ಎಂದು ಹೋಗಿದ್ದ ಸಂದರ್ಭದಲ್ಲಿ ದೇವಸ್ಥಾನದ ಬೀಗ ತೆಗೆದಿರುವುದು ನೋಡಿದಾಗ,ದೇವಸ್ಥಾನದ ಬಳಿಯಲ್ಲಿ ಹೋಗಿ ನೋಡಿದೆವು,ಒಳಗಡೆ ಇದ್ದ ಎಲ್ಲಾ ದೇವಿಯ ವಸ್ತ್ರಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆಯಲಾಗಿದೆ.ಹುಂಡಿಯ ಬಾಗಿಲು ತೆಗೆದಿದ್ದು ಒಳಗಡೆ ಇದ್ದ ಹಣವನ್ನು ಕದ್ದಿರುವ ಶಂಕೆ ಇದೆ,ಕಳ್ಳತನ ಮಾಡಿದ ಕಿಡಿಗೇಡಿಗಳು ಯಾರೆ ಇರಲಿ ಅವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಮೌನೇಶ ಆರ್.ಬೋವಿ ತಿಂಥಣಿ ಒತ್ತಾಯಿಸಿದ್ದಾರೆ.
ದೇವಸ್ಥಾನದ ಚಿಕ್ಕದಾಗಿದ್ದು ಒಳಗಡೆ ಯಾವ ಯಾವ ವಸ್ತುಗಳಿದ್ದವು ಎನ್ನುವುದು ಹಾಗು ಕದ್ದವರು ಯಾರು ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದುಬರಬೇಕಿದೆ.ಘಟನಾ ಸ್ಥಳಕ್ಕೆ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ,ದೇವಸ್ಥಾನದ ಪೂಜಾರಿ ಹೇಳುವಂತೆ ೪ ರಿಂದ ೫ ಸಾವಿರ ರೂಪಾಯಿಗಳು ಕಳ್ಳತನವಾಗಿರಬಹುದೆಂದು ಹೇಳಿದ್ದಾರೆ.ಕಳ್ಳತನ ಯಾರೇ ಮಾಡಿರಲಿ ಅವರನ್ನು ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪಿಎಸ್ಐ ಚಂದ್ರಶೇಖರ ನಾರಾಯಣಪುರ ಇತರರಿದ್ದರು.