ದೇವರು ದೆವ್ವ ಎರಡೂ ಮನುಷ್ಯರೆ ಆಗಿದ್ದಾರೆ: ವಿಶ್ವರಾಧ್ಯ ಸತ್ಯಂಪೇಟೆ

0
9

ಸುರಪುರ: ಬಸವಾದಿ ಶರಣರು ಹೇಳುತ್ತಾರೆ ಕಲ್ಲ ನಾಗರ ಕಂಡರೆ ಕೈಯ ಮುಗಿವರು ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರು ಜೊತೆಗೆ ತನ್ನ ತಾನರಿತೊಡೆ ತಾನೆ ದೇವರು ನೋಡಾ ಎಂದು ಬಸವಾದಿ ಶರಣರು ಹೇಳಿದ್ದಾರೆ.ಆದರೆ ಮೊನ್ನೆ ರಸ್ತಾಪುರ ಕ್ರಾಸ್ ಬಳಿಯಲ್ಲಿ ಮಹಿಳೆ ಮೇಲೆ ನಡೆದ ಹಲ್ಲೆಯನ್ನು ನೋಡಿದರೆ ಮನುಷ್ಯರೆ ದೆವ್ವಗಳಾಗಿದ್ದಾರೆ ಎಂಬುದು ಅರ್ಥವಾಗುತ್ತದೆ ಎಂದು ಪತ್ರಕರ್ತ ವಿಶ್ವರಾಧ್ಯ ಸತ್ಯಂಪೇಟೆ ಬೇಸರ ವ್ಯಕ್ತಪಡಿಸಿದರು.

ನಗರದ ಸತ್ಯಂಪೇಟೆಯಲ್ಲಿ ಲೋಗೈಕ್ಯ ಹೊನ್ನಪ್ಪ ಬೋನ್ಹಾಳವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ನಡೆದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಜಗತ್ತಿನಲ್ಲಿ ಮಹಿಳೆಯರಿಗೆ ಮೊಟ್ಟ ಮೊದಲು ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಿದ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಮನೆಯನ್ನೇ ತೊರೆದು ಬಂದ ಬಸವಣ್ಣ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.ಅಲ್ಲದೆ ಮಹಿಳೆಯರು ನಿತ್ಯವು ಬೆಳಿಗ್ಗೆ ಒಂದು ವಚನವನ್ನು ಓದುವ ಪರಿಪಾಠವನ್ನು ಬೆಳೆಸಿಕೊಳ್ಳು ಜೊತೆಗೆ ಮಕ್ಕಳಿಗೂ ಇದನ್ನು ರೂಢಿಸುವಂತೆ ಸಲಹೆ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಹಾಪುರ ಫಕಿರೇಶ್ವರ ಮಠದ ಗುರುಪಾದೇಶ್ವರ ಸ್ವಾಮೀಜಿಯವರು ಮಾತನಾಡಿ ಹೊನ್ನಪ್ಪ ಬೋನ್ಹಾಳ ಶರಣರು ಹೇಗಿದ್ದರು ಎನ್ನುವುದನ್ನು ಇಲ್ಲಿಯ ಕಾರ್ಯಕ್ರಮ ನೋಡಿದರೆ ಅರ್ಥವಾಗುತ್ತದೆ,ಪುಣ್ಯಸ್ಮರಣೆ ಎಂಬುದು ನೆಪವಾದರೂ ಈ ಕಾರ್ಯಕ್ರಮದ ಮೂಲಕ ಎಲ್ಲರಲ್ಲಿ ವಚನ ವಿಚಾರ ಮೂಡಿಸುವ ಆಸಕ್ತಿ ಹೊಂದಿದ ಬೋನ್ಹಾಳ ಕುಟುಂಬದ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಇದೇ ಸಂದರ್ಭಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನ ವಿ.ಪಾಟೀಲ್ ಹಾಗು ಸಾಹಿತಿ ಶಿವಣ್ಣ ಇಜೇರಿ ಮಾತನಾಡಿ,ಇತ್ತಿಚೇಗೆ ಮಹಿಳೆಯರು ಮತ್ತು ಚಿಕ್ಕ ಮಕ್ಕಳ ಮೇಲೆ ನಡೆಯುತ್ತಿರುವ ರಾಕ್ಷಸ ಕೃತ್ಯಗಳನ್ನು ನೋಡಿದರೆ ಮಹಿಳೆಯರು ಮನೆಯಿಂದ ಹೊರಬರುವುದು ಕಷ್ಟದಾಯಕವಾಗುತ್ತಿದೆ,ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಬಸವಾದಿ ಶರಣರ ವಿಚಾರಗಳು ಸಮಾಜದಲ್ಲಿ ಬಲವಾಗಿ ಬಿತ್ತುವ ಅವಶ್ಯವಿದೆ ಎಂದರು.

ಇದೇ ಸಂದರ್ಭದಲ್ಲಿ ರೈತ ಹೋರಾಟಗಾರ ಚನ್ನಪ್ಪ ಆನೆಗುಂದಿ ಭಾಗವಹಿಸಿ ೨೭ ರಂದು ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿರುವ ರೈತರ ಹೋರಾಟಕ್ಕೆ ಎಲ್ಲರು ಬೆಂಬಲಿಸುವಂವೆ ಮನವಿ ಮಾಡಿದರು.ಡಾ:ಶರಣಪ್ಪ ಸತ್ಯಂಪೇಟೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ವಿಶ್ವಗುರು ಬಸವಣ್ಣ ಹಾಗು ಹೊನ್ನಪ್ಪ ಬೋನ್ಹಾಳ ಶರಣರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ವಂದಿಸಿದರು. ಚನ್ನಮಲ್ಲಿಕಾರ್ಜುನ ಗುಂಡಾನೋರ ವಚನ ಪ್ರಾರ್ಥನೆ ಹಾಡಿದರು,ರಾಜು ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿವರುದ್ರ ಉಳ್ಳಿ ನಿರೂಪಿಸಿದರು,ಬನಶಂಕರ ಬೋನಾಳ ಸ್ವಾಗತಿಸಿದರು,ಚಂದ್ರಶೇಖರ ಡೊಣೂರ ವಂದಿಸಿದರು.ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ ಸೇರಿದಂತೆ ಬೋನ್ಹಾಳ ಪರಿವಾರದ ಸದಸ್ಯರು ಹಾಗು ಅನೇಕ ಜನ ಬಸವಾನುಯಾಯಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here