ಜೆವರ್ಗಿ : ಮತಕ್ಷೇತ್ರದಲ್ಲಿ ಬರುವ ಯಡ್ರಾಮಿ ತಾಲೂಕಿನ ಕಾಸರ ಭೋಸ್ಗ ನಿಂದ ಆಲೂರು ವರೆಗೆ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿ ಮಾರ್ಪಟಿದ್ದು, ಶಾಸಕರಾಗಿ ಸಂಬಂಧಪಟ್ಟ ಅಧಿಕಾರಿಗಳಾಗಿಲ್ಲ ಗಮನ ಹರಿಸುತ್ತಿಲ್ಲ ಎಂದು ಪ್ರತಿ ನಿತ್ಯ ಸಂಚರಿಸುವ ಜನರು ಆಸಮಧಾನ ವ್ಯಕ್ತಪಡಿಸಿದ್ದಾರೆ.
ಎಷ್ಟು ಹದಗೆಟ್ಟಿದೆ ರೈತರಿಗೆ ಎಷ್ಟೊಂದು ತ್ರಾಸ್ ಆಗುತ್ತಿದೆ ದಯವಿಟ್ಟು ಮಾನ್ಯ ಶಾಸಕರು ಗಮನಿಸಬೇಕು ಇದಕ್ಕೊಂದು ಪರಿಹಾರ ಹುಡುಕಬೇಕು. ಮತಕ್ಷೇತ್ರದಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕಲ್ಬುರ್ಗಿಯಲ್ಲಿ ಇರುವ ಸಮಸ್ಯೆಗಳಿಗೆ ಸ್ಪಂದನೆ ಮಾಡುತ್ತೀರಾ ಜೇವರ್ಗಿ ತಾಲೂಕಿನ ಎಲ್ಲಾ ಹಳ್ಳಿಗಳಿಗೆ ಹೋಗಿ ಸರ್ವೆ ಮಾಡಿ ರಸ್ತೆಗಳು, ಕುಡಿಯುವ ನೀರು, ಒಳಚರಂಡಿ, ರೈತರ ಸಮಸ್ಯೆ, ಅನೇಕ ರೀತಿಯ ಸಮಸ್ಯೆಗಳು ಜೇವರ್ಗಿ ತಾಲೂಕಿನಲಿ ಇವೆ ಇದನ್ನು ಪರಿಹರಿಸಿ ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ನಯ ಸವೆರ ಸಂಘಟನೆ ವತಿಯಿಂದ ಎಚ್ಚರಿಕೆ ನೀಡಿ ಆಗ್ರಹಿಸಲಾಗಿದೆ.