ಶ್ರೀಮತಿ ವಿ.ಜಿ.ಮಹಿಳಾ ಪದವಿ ಮಹಾವಿದ್ಯಾಲಯ ಕಲಬುರಗಿ .ರಾಷ್ಟೀಯ ಸೇವಾ ಯೋಜನಾ ಘಟಕಗಳ ಅಡಿಯಲ್ಲಿ ಸ್ವಾಮಿ ವಿವೇಕಾನಂದ ಅವರ ಜನ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ರಾಷ್ಟ್ರೀಯ ಯುವ ಸಪ್ತಾಹ -2022 ರ ಉದ್ಘಾಟನಾ ಸಮಾರಂಭ ಜರುಗಿತು.
ಪ್ರಾರ್ಥನೆ ಮಾಡುವ ತುಟಿಗಳಿಗಿಂತ ದುಡಿಯುವ ಕೈ ಶ್ರೇಷ್ಠ . ಎನ್ಬುವಂತೆ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಹಾಗೂ ವಿವೇಕಾನಂದರ ಜನ್ಮದಿನವನ್ನು ಯುವದಿನವನ್ನಾಗಿ ಆಚರಿಸುವ ಉದ್ದೇಶ ಅವರು ಯುವಶಕ್ತಿಯಲ್ಲಿಟ್ಟಿದ್ದ ಅಪಾರ ವಿಶ್ವಾಸವೆ ಕಾರಣ ಎಂದು ಪ್ರೊ.ನರೇಂದ್ರ ಬಡಶೇಷಿ ಉದ್ಘಾಟನಾ ಭಾಷಣದಲ್ಲಿ ಹೇಳಿದರು ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ಆರ್.ಬಿ ಕೊಂಡಾ ವಹಿಸಿಕೊಂಡಿದ್ದರು ಡಾ.ಮುಖಿಮೀಯ ಪ್ರಾರ್ಥಿಸಿದರು.
ಡಾ.ಶಾಂತಾ ಮಠ ಸ್ವಾಗತಿಸಿದರು ಡಾ.ಮಹೇಶ ಗಂವ್ಹಾರ ನಿರೂಪಿಸಿದರು ಕುಮಾರಿ ಸುಧಾ ವಂದಿಸಿದರು .ಕಾರ್ಯಕ್ರಮದ ಲ್ಲಿ ಮಹಾವಿದ್ಯಾಲಯದ ಸಿಬ್ಬಂದಿಗಳಾದ ಡಾ.ವಿಜಯಕುಮಾರ ಪರುತೆ,ಡಾ.ನಾಗೇಂದ್ರ ಮಸುತಿ,ಡಾ.ಶಿವರಾಜ ಮುಲಗೆ,ಡಾ.ಪ್ರೇಮಚಂದ ಚವ್ಹಾಣ,ಡಾ.ರಾಜೇಶ,ಪ್ರೊ.ಸಿದ್ದಲಿಂಗ ಪ್ರೊ ಉಮಾ ಮಿಣಜಗಿ ಹಾಗೂಬೋಧಕ, ಬೋಧಕೇತರ ಸಿಬ್ಬಂದಿ ,.ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದೆ ಸಂದರ್ಭದಲ್ಲಿ ಸಪ್ತಾಹದ ಅಂಗವಾಗಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ನಿಯರಿಗೆ ಉಚಿತ ಚರ್ಮ ಹಾಗೂ ಕೂದಲು ಉದುರುವಿಕೆಯ ಕುರಿತು ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು ಹಾಗೂ ಮಹಾವಿದ್ಯಾಲಯದ ಮಹಿಳಾ ದೌರ್ಜನ್ಯ ತಡೆ ಕೋಶದ ಸಹಯೋಗದೊಂದಿಗೆ ಮಹಿಳಾ ದೌರ್ಜನ್ಯ ಹಾಗು ಅಪರಾಧ ತಡೆ ಯ ಬಗ್ಗೆ ಅರಿವಿನ ಪಯಣದ ಮೂಲಕ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.