Monday, July 15, 2024
ಮನೆಬಿಸಿ ಬಿಸಿ ಸುದ್ದಿನಮ್ಮ ಭಾಗಕ್ಕೆ ಆಗುತ್ತಿರುವ ಅನ್ಯಾಯಗಳ ಪಟ್ಟಿ ಕೊಟ್ಟು ಸಾಕಾಗಿದೆ: ಶಾಸಕ ಪ್ರಿಯಾಂಕ್ ಖರ್ಗೆ

ನಮ್ಮ ಭಾಗಕ್ಕೆ ಆಗುತ್ತಿರುವ ಅನ್ಯಾಯಗಳ ಪಟ್ಟಿ ಕೊಟ್ಟು ಸಾಕಾಗಿದೆ: ಶಾಸಕ ಪ್ರಿಯಾಂಕ್ ಖರ್ಗೆ

ಕಲಬುರಗಿ: ಬಿಜೆಪಿ ಸರ್ಕಾರ ಬಂದ ನಂತರ ಕಲ್ಯಾಣ ಕರ್ನಾಟಕ ಭಾಗಕ್ಕೆ ಆಗಿರುವ ಅನ್ಯಾಯಗಳ ಪಟ್ಟಿ ಮಾಡಿ ಕೊಟ್ಟು ನಮಗೂ ಸಾಕಾಗಿದೆ. ನಮ್ಮ ಭಾಗದ ಜನರ ಮೇಲೆ ‌ನಿಮಗೆ ಅಷ್ಟು ದ್ವೇಷ ವಿದ್ದರೆ, ದಿನಾ‌ ಸಾಯಿಸುವ ಬದಲು ಡೈರೆಕ್ಟ್ ವಿಷ ಕೊಟ್ಟುಬಿಡಿ ಎಂದು ಮಾಜಿ‌ ಸಚಿವರಾ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ.

ಈ ಬಗ್ಗೆ ಟ್ವಿಟರ್ ನಲಿ ಬರೆದುಕೊಂಡಿರುವ ಅವರು ಆರ್ಟಿಕಲ್ 371(J) ಮೀಸಲಾತಿಯಡಿ ದೊರಕಬೇಕಿದ್ದ 2161 ಸರ್ಕಾರಿ ಹುದ್ದೆಗಳನ್ನು ಮಾಹಿತಿ ಕೊಡದೆ ವಂಚಿಸಿ, ಮುಚ್ಚಿಡುವ ಕೆಲಸ ಮಾಡಲಾಗಿದೆ ಎಂದು ಹೇಳಿ ಈ ಬಗ್ಗೆ ಪತ್ರಿಕೆಯ ವೆಬ್ ವರದಿಯ ತುಣುಕೊಂದೊನ್ನು ಕೂಡಾ ಅವರು ಹಂಚಿಕೊಂಡಿದ್ದಾರೆ.

ನಮ್ಮ ಭಾಗಕ್ಕೆ ಆಗುತ್ತಿರುವ ಅನ್ಯಾಯಗಳ ಪಟ್ಟಿ ಕೊಟ್ಟು ಸಾಕಾಗಿದೆ. ನಿಮಗೆ ನಮ್ಮ ಭಾಗದ ಜನರ ಮೇಲೆ ಅಷ್ಟೊಂದು ದ್ವೇಷವಿದ್ದರೆ ಡೈರೆಕ್ಟ್ ವಿಷ ಕೊಡಿ ಎಂದು ನೋವಿನಿಂದ ಬರೆದಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular