ಕಲಬುರಗಿ: ನಗರದ ಎಸ್ಬಿಆರ್ ಶಾಲೆ ಆವರಣದ ಪೂಜ್ಯ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಹಮ್ಮಿಕೊಂಡ ಜಿಲ್ಲಾಮಟ್ಟದ ಭಾರತ ಸೌಟ್ಸ್ ಮತ್ತು ಗೈಡ್ಸ್ ಶಿಕ್ಷಕರ ಒಂದು ದಿನದ ಕಾರ್ಯಾಗಾರ ಹಾಗೂ ಎಸ್ಎಸ್ಎಲ್ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು.
ಈ ಸಂರ್ದದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಪೂಜ್ಯ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಸೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ಗರಿಮಾ ಪಂವಾರ, ಶಂಕ್ರಮ್ಮ ಢವಳಗಿ, ಎಲ್.ಟಿ ಲೋಕೇಶ, ಸಪ್ಪಗೌಡ ಬಿರಾದಾರ, ಶಂಕರಗೌಡ ಹೊಸಮನಿ, ಸಿ.ಬಿ ಪಾಟೀಲ ಓಕಳಿ, ಶೀಲಾ ಸಿದ್ರಾಮ, ಮಲ್ಲೇಶ್ವರಿ ಜುಜಾರೆ, ಡಾ. ಎಂ.ಎಸ್ ಪಾಸೋಡಿ, ಎಸ್.ಪಿ.ಸುಳ್ಳದ್, ಸುಜಾತಾ ಮುಲ್ಲಾ, ಚನ್ನವೀರಯ್ಯ ಸ್ವಾಮಿ, ಅಯ್ಯಪ್ಪ ಅಂಬರಖೇಡ ಇದ್ದರು.