ವಾಡಿ: ಬೆಂಗಳೂರಿನಲ್ಲಿ ರವಿವಾರ ಕಲಾಬಂಧು ಫೌಂಡೇಷನ್ ಹಾಗೂ ಕನ್ನಡ ದಿನಪ್ರತಿಕೆ ವತಿಯಿಂದ ಏರ್ಪಡಿಸಲಾಗಿದ್ದ ಕಲಾ ಪ್ರತಿಭೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಮಹರ್ಷಿ ವಾಲ್ಮೀಕಿ ಸಮಾಜದ ಚಿತ್ತಾಪುರ ತಾಲೂಕು ಅಧ್ಯಕ್ಷ ಭೀಮರಾವ ದೊರೆ ಅವರಿಗೆ ರಾಜ್ಯಮಟ್ಟದ ಸಮಾಜಸೇವಾ ರತ್ನ-೨೦೨೨ ಪ್ರಶಸ್ತಿ ಹಾಗೂ ಪುರಸ್ಕಾರ ನೀಡಿ ಗೌರವಿಸಿದರು.
ಕಲಾಬಂಧು ಫೌಂಡೇಷನ್ ಅಧ್ಯಕ್ಷ ಎಚ್.ನರಸಿಂಹರಾಜು, ಮಹರ್ಷಿ ವಾಲ್ಮೀಕಿ ಸಮಾಜದ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ ಇದ್ದರು.