ಸೇಡಂ: ಮತಕ್ಷೇತ್ರದ ಮುಗನೂರ ಗ್ರಾಮಕ್ಕೆ ಜೆಡಿಎಸ್ ಅಭ್ಯರ್ಥಿ ಬಾಲರಾಜ್ ಗುತ್ತೇದಾರ ಸೋಮವಾರ ಭೇಟಿ ನೀಡಿದ್ದರು.
ಕೆಲವು ದಿನಗಳಿಂದ ಗ್ರಾಮದಲ್ಲಿ ಅನೇಕರು ಕಾಲರಾ ರೋಗದಿಂದ ಬಳಲುತ್ತಿದ್ದಾರೆ ಎಂದು ತಿಳಿದು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ನೀಡಿ ಯಾವುದೆ ಕಾರಣಕ್ಕೂ ಭಯ ಪಡಬೇಡಿ, ನಾಳೆ ನಿಮ್ಮ ಊರಿಗೆ ಉತ್ತಮವಾದ ವೈದ್ಯರನ್ನು ಬಾಲರಾಜ್ ಬ್ರಿಗೇಡ್ ವತಯಿಂದ ಕರೆಸಿ ಉಚಿತ ಆರೋಗ್ಯ ತಪಾಸಣೆ ಮಾಡಿ ನಿಮ್ಮ ಸಮಸ್ಯೆ ಬಗೆ ಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆಯಲ್ಲಿ ಗ್ರಾಮಸ್ಥರ ಊರಿನ ಸಮಸ್ಯೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ಹಾಗೂ ಊರಿನ ಗಣ್ಯರು ಆದ ಅನಿಲ ಕರ್ಣಿ, ಮಲ್ಲು ಪೂಜಾರಿ,ಸಿದ್ದು ಪರದೇಶಿ, ನಾಗರಾಜ್, ಭೀಮರಾಯ ಕೊಳ್ಳಿ, ದೇವೇಂದ್ರ, ಗುಡುಸಾಬ್ ಉಪಸ್ಥಿತರಿದ್ದರು.