- ಕಡಕೋಳ ಮಡಿವಾಳೇಶ್ವರ ಮಹಾಮಠದಲ್ಲಿ 21ರಂದು ಧಾರ್ಮಿಕ- ಸಂಗೀತ ಕಾರ್ಯಕ್ರಮ
ಯಡ್ರಾಮಿ: ತಾಲೂಕಿನ ಶ್ರೀ ಕಡಕೋಳ ಮಡಿವಾಳೇಶ್ವರ ಮಹಾಮಠದಲ್ಲಿ ಶ್ರೀ ವೀರೇಶ್ವರ ಶಿವಯೋಗಿಗಳ 34ನೇ ಪುಣ್ಯ ಸ್ಮರಣೋತ್ಸವ ಜು.21ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಹಾಮಠ ತಿಳಿಸಿದೆ.
ಶ್ರೀ ವೀರೇಶ್ವರ ಶಿವಯೋಗಿಗಳ 34ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವೂ ಷ.ಬ್ರ.ಶ್ರೀ ರುದ್ರಮುನಿ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅಂದು ರಾತ್ರಿ 8ಕ್ಕೆ ಧರ್ಮಸಭೆ, 10 ಗಂಟೆಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಕಲ ಸದ್ಭಕ್ತರು ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದು ಪುನೀತರಾಗಬೇಕು ಎಂದು ಪ್ರಕಟಣೆ ತಿಳಿಸಿದೆ.